‘ಅಪಘಾತದ ಸುದ್ದಿ ತಂದೆಗೆ ಗೊತ್ತಾದರೆ ಬೈಯುತ್ತಾರೆಂದು ಗೌತಮ್ ಭಾವಿಸಿದ್ದ. ಅಪಹರಣ ಹಾಗೂ ಹಲ್ಲೆ ನಾಟಕವಾಡಲು ತೀರ್ಮಾನಿಸಿದ್ದ ಈತ, ಬ್ಲೇಡ್ನಿಂದ ಕೈ ಹಾಗೂ ಭುಜ ಕೊಯ್ದುಕೊಂಡಿದ್ದ. ನಂತರ, ತಂದೆ ಹಾಗೂ ಸ್ನೇಹಿತರಿಗೆ ಕರೆ ಮಾಡಿದ್ದ. ‘ನನ್ನನ್ನು ಯಾರೂ ಅಪಹರಣ ಮಾಡಿ ಹಲ್ಲೆ ಮಾಡಿದ್ದಾರೆ’ ಎಂದು ಸುಳ್ಳು ಹೇಳಿದ್ದ. ಸ್ಥಳಕ್ಕೆ ಬಂದಿದ್ದ ತಂದೆ ಹಾಗೂ ಸ್ನೇಹಿತರು, ಗೌತಮ್ನನ್ನು ಆಸ್ಪತ್ರೆಗೆ ಸೇರಿ ಚಿಕಿತ್ಸೆ ಕೊಡಿಸಿದ್ದರು’ ಎಂದು ಪೊಲೀಸರು ತಿಳಿಸಿದರು.