‘ಕೋವಿಡ್ - 19 ಎರಡನೇ ಅಲೆಯ ಸಂದರ್ಭದಲ್ಲಿ ಬಿಬಿಎಂಪಿ ಪೂರ್ವ ವಲಯದ ಆರೋಗ್ಯ ಅಧಿಕಾರಿಯಾಗಿದ್ದ ಡಾ. ಸವಿತಾ ಹಾಗೂ ಶಾಂತಿನಗರ ವಿಭಾಗದ ಆರೋಗ್ಯ ವೈದ್ಯಾಧಿಕಾರಿಯಾಗಿದ್ದ ಡಾ. ಶ್ರೀನಿವಾಸ್ ಗೌಡ ಅವರು, ಪಾಲಿಕೆಯ ಸಿಬ್ಬಂದಿಗೇ ‘ಎಂಒಎಚ್ ಶಾಂತಿನಗರ ರೇಂಜ್ ಕೋವಿಡ್ ಸ್ಟ್ಯಾಫ್ ಡಿಇಒ ಆ್ಯಂಡ್ ಸ್ವಾಬ್ ಕಲೆಕ್ಟರ್ಸ್ ಸ್ಯಾಲರಿ ಬಿಲ್’ ಎಂದು ಡಿಸಿ ಬಿಲ್ಗಳ ಮೂಲಕ ತಲಾ ₹75,225 ಅನ್ನು 10 ಖಾತೆಗಳಿಗೆ ವರ್ಗಾವಣೆ ಮಾಡಲಾಗಿದೆ. ನಂತರ ಆ ಹಣವನ್ನು ಸವಿತಾ ಅವರ ಮಗನಾದ ಸಿದ್ಧರಾಜು ಚಿರಾಗ್ ಖಾತೆಗೆ ವರ್ಗಾಯಿಸಿಕೊಳ್ಳಲಾಗಿದೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.