ಸುಬ್ರಮಣಿ ಮತ್ತು ಸಂತೋಷ್ ಮದ್ಯವ್ಯಸನಿಗಳಾಗಿದ್ದು, ಪತ್ನಿಯಿಂದಪ್ರತ್ಯೇಕವಾಗಿದ್ದಾರೆ. ಎಲ್ಲರೂ ಪೇಂಟಿಂಗ್ ಕೆಲಸ ಮಾಡುತ್ತಿದ್ದರು. ಭುವನೇಶ್ವರಿ ನಗರದ ಶನಿ ಮಹಾತ್ಮ ದೇವಸ್ಥಾನದ ಹಿಂಭಾಗದಲ್ಲಿರುವ ಖಾಲಿ ನಿವೇಶನದಲ್ಲಿ ಸುಬ್ರಮಣಿ, ಸಂತೋಷ್, ಮಹಾವೀರ್ ಮತ್ತು ತಲೆಮರೆಸಿಕೊಂಡಿರುವ ರವಿ ಮದ್ಯ ಖರೀದಿಸಿ ಭಾನುವಾರ ಸಂಜೆ ಆರು ಗಂಟೆಯಿಂದ ಪಾರ್ಟಿ ಮಾಡುತ್ತಿದ್ದರು. ಇದಕ್ಕೂ ಮೊದಲು ನಾಲ್ವರು ಸ್ನೇಹಿತರು ಪೇಂಟಿಂಗ್ ಕೆಲಸ ಮಾಡುವ ಮಾಲೀಕನಿಂದ ಹಣ ಪಡೆದಿದ್ದರು. ಹಣ ಹಿಂದಿರುಗಿಸುವಾಗ ಬಗ್ಗೆ ಭಾನುವಾರ ಸ್ನೇಹಿತರ ಜತೆ ಚರ್ಚೆ ಆರಂಭವಾಗಿದೆ.