‘ನಂದಿನಿ, ಯೋಗೇಶ್, ಕೀರ್ತನಾ, ಪ್ರಶಾಂತ್, ತ್ರಿವೇಣಿ, ಮಂಜುನಾಥ್, ಶ್ವೇತಾಗೌಡ, ಮೋಹನ್ಗೌಡ, ಸಂತೋಷ್, ಬ್ಯಾಂಕ್ ಅಧಿಕಾರಿಗಳು ಸೇರಿದಂತೆ ಹಲವರು ಹಿಂದೂಜಾ ಹೌಸಿಂಗ್ ಫೈನಾನ್ಸ್ನಲ್ಲಿ ₹45 ಲಕ್ಷ, ಪಿರಮಲ್ ಹೌಸಿಂಗ್ ಫೈನಾನ್ಸ್ನಲ್ಲಿ ₹56 ಲಕ್ಷ, ಈಕ್ವಿಟಾಸ್ ಸ್ಮಾಲ್ ಫೈನಾನ್ಸ್ನಲ್ಲಿ ₹25 ಲಕ್ಷ ಸಾಲ ಪಡೆಯಲು ಯೋಜನೆ ರೂಪಿಸಿದ್ದರು. ಆದರಲ್ಲಿ ಫೈನಾನ್ಸ್ ಕಂಪನಿ ಹಾಗೂ ವೈಯಕ್ತಿಕವಾಗಿ ₹80 ಲಕ್ಷ ಸಾಲ ಪಡೆದುಕೊಂಡಿದ್ದರು. ವೈಯಕ್ತಿಕವಾಗಿ ಪಡೆದ ಹಣ ಹಾಗೂ ಫೈನಾನ್ಸ್ಗಳಿಂದ ಸಾಲವನ್ನು ವಾಪಸ್ ನೀಡಿರಲಿಲ್ಲವೆಂದು ದೂರು ನೀಡಿದ್ದರು. ದೂರು ಆಧರಿಸಿ ಕಾರ್ಯಾಚರಣೆ ನಡೆಸಲಾಯಿತು’ ಎಂದು ಪೊಲೀಸರು ಹೇಳಿದರು.