‘ರಾಜಾಜಿನಗರದ ಚಿನ್ನದ ವ್ಯಾಪಾರಿ ಚೇತನ್ ಎಂಬುವರ ಬಳಿ ಪ್ರಭುರಾಮ್ ಕೆಲಸ ಮಾಡುತ್ತಿದ್ದರು. ಮಾಲೀಕನ ಸೂಚನೆಯಂತೆ ಪ್ರಭುರಾಮ್, 1 ಕೆ.ಜಿ 700 ಗ್ರಾಂ ಚಿನ್ನಾಭರಣ ತೆಗೆದುಕೊಂಡು ಫೆ. 12ರಂದು ಬೈಕ್ನಲ್ಲಿ ಹೊರಟಿದ್ದರು. ಅವರನ್ನು ಅಡ್ಡಗಟ್ಟಿದ್ದ ಆರೋಪಿಗಳು, ತಮ್ಮ ಬ್ಯಾಗ್ನಲ್ಲಿ ಪಿಸ್ತೂಲ್ ಇರುವುದಾಗಿ ಹೇಳಿ ಬೆದರಿಸಿ ಚಿನ್ನಾಭರಣ ಸುಲಿಗೆ ಮಾಡಿಕೊಂಡು ಪರಾರಿಯಾಗಿದ್ದರು’ ಎಂದೂ ತಿಳಿಸಿದರು.