ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹುಣ್ಣಿಮೆ ಹಾಡು 188ರ ಅಂಗವಾಗಿ ಈ ಉತ್ಸವವನ್ನು ಆಯೋಜಿಸಲಾಗುತ್ತಿದೆ. ಫೆ.23ರ ಸಂಜೆ 5ಕ್ಕೆ ಸಂಗೀತ ಶ್ರೀಕಿಷನ್ ಅವರು ಹಾಡಲಿದ್ದು, ಅವರಿಗೆ ಪಿಟೀಲು ವಾದಕ ಆದಿತ್ಯ ಮಣಿಕರ್ಣಿಕ, ಮೃದಂಗ ವಾದಕ ಪೃಥ್ವಿ ಕಷ್ಣ ಅವರು ಸಾಥ್ ನೀಡಲಿದ್ದಾರೆ. ಪದ್ಮ ರಘುನಂದನ್, ಗೋದಾ ಮನು ಅವರು ಯುಗಳ ಗಾಯನ ಪ್ರಸ್ತುತ ಪಡಿಸಲಿದ್ದು, ಪಿಟೀಲು ವಾದಕ ವೆಂಕಟೇಶ ಜೋಷಿಯರ್, ಮೃದಂಗ ವಾದಕ ಜಿ.ಎಸ್. ನಾಗರಾಜ್ ಸಾಥ್ ನೀಡಲಿದ್ದಾರೆ’ ಎಂದು ಮಾಹಿತಿ ನೀಡಿದರು.