ಅಬ್ದುಲ್ ರಿಯಾಜ್ ಖಾನ್ ಅವರು, ಈ ಹಿಂದಿನ ಪರಿಷತ್ ಸದಸ್ಯರಾಗಿದ್ದವರು. ಹಾಲಿ ಸದಸ್ಯರನ್ನು ಪರಿಗಣಿಸಬೇಕಾದರೆ, 2017ರ ಮಾರ್ಚ್ 27ರಂದು ರಾಜ್ಯ ವಕೀಲರ ಪರಿಷತ್ಗೆ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿರುವ ರಿಯಾಜ್ ಖಾನ್ ನಾಮ ನಿರ್ದೇಶನ ಆಗಬೇಕಿತ್ತು. ಆದರೆ, ಪರಿಷತ್ ಚುನಾಯಿತ ಪ್ರತಿನಿಧಿಗಳ ಆಯ್ಕೆ ಬಗ್ಗೆ ಚುನಾವಣಾ ತಕರಾರು ದೆಹಲಿಯ ಪರಿಷತ್ ನ್ಯಾಯಮಂಡಳಿ ಮುಂದೆ ವಿಚಾರಣೆ ಹಂತದಲ್ಲಿದೆ. ಹೀಗಾಗಿ ಅಧಿಕೃತ ಅಧಿಸೂಚನೆ ಇನ್ನೂ ಹೊರಬಿದ್ದಿಲ್ಲ.