ಅಸೋಸಿಯೇಷನ್ ಸದಸ್ಯ ಎಂ.ಎಸ್. ಮಂಜುನಾಥ್, ‘ಹೆಸ್ಕಾಂ, ಬೆಸ್ಕಾಂ ಮತ್ತು ಸೆಸ್ಕ್ನ ಆದೇಶವಿದೆ ಎಂಬ ಕಾರಣಕ್ಕೆ ಟೆಂಡರ್ ಪಡೆದುಕೊಂಡಿರುವ ಗುತ್ತಿಗೆದಾರರು, ₹ 500 ಕೋಟಿಗೂ ಹೆಚ್ಚಿನ ಬಂಡವಾಳ ಹೂಡಿ ಅಗತ್ಯವಿರುವ ಸಾಮಗ್ರಿಗಳನ್ನು ಖರೀದಿಸಿ ದಾಸ್ತಾನು ಮಾಡಿಕೊಂಡಿದ್ದಾರೆ. ಈ ಸಾಮಗ್ರಿಗಳ ಖರೀದಿಗಾಗಿ ಬ್ಯಾಂಕ್ಗಳಿಂದ ಸಾಲ ಮಾಡಿಕೊಂಡು, ಬಡ್ಡಿ ಪಾವತಿ ಮಾಡುತ್ತಿದ್ದೇವೆ. ಆದರೆ ಸರ್ಕಾರ ಮಾತ್ರ ಕಾರ್ಯಾದೇಶ ನೀಡಲು ಸತಾಯಿಸುತ್ತಿದೆ’ ಎಂದು ಹೇಳಿದರು.