ಮೇಳದ ಸಂಚಾಲಕ ಸಂದೀಪ್ ಬೇಕಲ್, ‘ರಾಜ್ಯದ ಜನತೆಯ ಅಭಿರುಚಿಗೆ ಅನುಗುಣವಾದ ಒಡವೆಗಳು ಇಲ್ಲಿರಲಿವೆ. ಜಿಆರ್ಟಿ, ಭೀಮಾ, ಜೋಯ್ ಅಲುಕ್ಯಾಸ್, ಆಭರಣ, ಶ್ರೀ ಗಣೇಶ ಡೈಮಂಡ್ಸ್, ಪಂಚ ಕೇಸರಿ, ಎಂ.ಪಿ. ಸ್ವರ್ಣ ಮಹಲ್,ಕ್ರಿಯೇಷನ್ಸ್ ಜ್ಯುವೆಲರಿ, ಪಿಎಂಜೆ ಜ್ಯುವೆಲ್ಸ್ ಸೇರಿದಂತೆ ವಿವಿಧ ಆಭರಣ ಮಳಿಗೆಯಲ್ಲಿ ಸಿಗುವ ಇತ್ತೀಚಿನ ಸಂಗ್ರಹಗಳನ್ನು ಒಂದೇ ಸೂರಿನಡಿ ಪ್ರದರ್ಶಿಸಲಾಗುತ್ತದೆ. ಅದೇ ರೀತಿ,ಮುಂಬೈ, ದೆಹಲಿ, ಜೈಪುರ, ಕೋಲ್ಕತ್ತ, ಪುಣೆ ಸೇರಿದಂತೆ ವಿವಿಧ ಕಡೆಗಳ ಆಭರಣಗಳು ಮೇಳದಲ್ಲಿರಲಿವೆ’ ಎಂದು ಮಾಹಿತಿ ನೀಡಿದರು.