ಹದಿನೈದನೇ ಶತಮಾನದ ಕನ್ನಡದ ಕ್ಲಾಸಿಕ್ ಕೃತಿ ಎನಿಸಿದ ಕುಮಾರವ್ಯಾಸ ಭಾರತವು ತನ್ನ ಅನನ್ಯತೆಯಿಂದ ಓದುಗರ ಮನವನ್ನು ಸೂರೆಗೊಂಡಿದೆ. ಸಾವಿರಾರು ಕನ್ನಡಿಗರ ಮನೆಯಲ್ಲಿ ನಿತ್ಯವೂ ಪಾರಾಯಣ ಮಾಡುತ್ತಿದ್ದ ಮಹಾಕಾವ್ಯವೂ ಇದಾಗಿದೆ. ಕುಮಾರವ್ಯಾಸ ಕವಿಯನ್ನು ಶೇಕ್ಸ್ಪಿಯರ್, ಕಾಳಿದಾಸ ಅವರಂತಹ ಮಹಾನ್ ಕವಿಗಳ ಜತೆಗೆ ಹೋಲಿಕೆ ಮಾಡಲಾಗುತ್ತದೆ. ಬಿಐಸಿಯಲ್ಲಿ ನಡೆಯಲಿರುವ ಉಪನ್ಯಾಸ ಸರಣಿಯಲ್ಲಿ ಶ್ರೀಧರ್ ಮತ್ತು ಹನೂರು ಅವರು, ಕುಮಾರವ್ಯಾಸ ಕವಿಯ ಮೇರು ವ್ಯಕ್ತಿತ್ವ, ಆತನ ಕಾಲಘಟ್ಟ, ಕವಿಯ ಕಾಣ್ಕೆ ಮತ್ತು ಮಹಾಭಾರತದ ಪಾತ್ರಪ್ರಪಂಚದ ‘ಉದ್ಯಾನ’ದಲ್ಲಿ ಕೇಳುಗರನ್ನು ಸುತ್ತಾಡಿಸಲಿದ್ದಾರೆ.