ಚಂದಾಪುರದಲ್ಲಿ ದುರ್ಗಾರಾಂ ಎಂಬುವರು ಥಾಮ್ಸನ್ ಕಂಪನಿಯ ಟಿವಿ ಶೋ ರೂಂ ಆರಂಭಿಸುವ ಉದ್ದೇಶದಿಂದ ತಮ್ಮ ಅಂಗಡಿಯಲ್ಲಿ ಮರಗೆಲಸ ಮಾಡಿಸುತ್ತಿದ್ದರು. ಒಳಭಾಗದಲ್ಲಿ ಕೆಲಸಪೂರ್ಣಗೊಂಡ ಬಳಿಕ ಹೊಸ ಟಿವಿಗಳನ್ನು ಶೋ ರೂಂ ತಂದು ಇಡಲಾಗಿತ್ತು. ಅಂಗಡಿ ಹೊರಭಾಗದಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ, 20 ಟಿವಿ
ಗಳನ್ನು ಕದ್ದು, ಮಾಗಡಿ ರಸ್ತೆಯ ಟೋಲ್ಗೇಟ್ಗೆ ಬಳಿ ತಾನು ನೆಲೆಸಿದ್ದ ಬಾಡಿಗೆ ಮನೆಯಲ್ಲಿ ಇಟ್ಟಿದ್ದ. ಬಳಿಕ ಅವುಗಳನ್ನು ನರೇಂದ್ರ ಎಂಬಾತನ ಮೂಲಕ ಪುಣೆಯಲ್ಲಿ ಮಾರಾಟ ಮಾಡಲು ಸಂಚು ರೂಪಿಸಿದ್ದ.