<p><strong>ಬೆಂಗಳೂರು:</strong> ಟಿವಿ ಶೋ ರೂಂನ ಒಳಾಂಗಣ ವಿನ್ಯಾಸಕ್ಕೆ ಬಂದಿದ್ದ ಬಡಗಿ, ಅಲ್ಲಿ ಸಂಗ್ರಹಿಸಿ ಇಟ್ಟಿದ್ದ ₹ 3.66 ಲಕ್ಷ ಮೌಲ್ಯದ 20 ಎಲ್ಇಡಿ ಟಿ.ವಿಗಳನ್ನು ಕಳವು ಮಾಡಲು ಯತ್ನಿಸಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ!</p>.<p>ರಾಜಸ್ಥಾನದ ನಾಗೋರ್ ನಿವಾಸಿ ದೇವಾರಾಂ (22) ಬಂಧಿತ ಆರೋಪಿ. ಕದ್ದೊಯ್ದಿದ್ದ ಟಿವಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕೃತ್ಯದಲ್ಲಿ ಭಾಗಿಯಾಗಿದ್ದ ನರೇಂದ್ರ ಎಂಬಾತ ಸೇರಿ ಇತರ ಇಬ್ಬರಿಗಾಗಿ ಬಂಡೇಪಾಳ್ಯ ಠಾಣೆ ಪೊಲೀಸರು ಹುಡುಕಾಡುತ್ತಿದ್ದಾರೆ.</p>.<p>ಚಂದಾಪುರದಲ್ಲಿ ದುರ್ಗಾರಾಂ ಎಂಬುವರು ಥಾಮ್ಸನ್ ಕಂಪನಿಯ ಟಿವಿ ಶೋ ರೂಂ ಆರಂಭಿಸುವ ಉದ್ದೇಶದಿಂದ ತಮ್ಮ ಅಂಗಡಿಯಲ್ಲಿ ಮರಗೆಲಸ ಮಾಡಿಸುತ್ತಿದ್ದರು. ಒಳಭಾಗದಲ್ಲಿ ಕೆಲಸಪೂರ್ಣಗೊಂಡ ಬಳಿಕ ಹೊಸ ಟಿವಿಗಳನ್ನು ಶೋ ರೂಂ ತಂದು ಇಡಲಾಗಿತ್ತು. ಅಂಗಡಿ ಹೊರಭಾಗದಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ, 20 ಟಿವಿ<br />ಗಳನ್ನು ಕದ್ದು, ಮಾಗಡಿ ರಸ್ತೆಯ ಟೋಲ್ಗೇಟ್ಗೆ ಬಳಿ ತಾನು ನೆಲೆಸಿದ್ದ ಬಾಡಿಗೆ ಮನೆಯಲ್ಲಿ ಇಟ್ಟಿದ್ದ. ಬಳಿಕ ಅವುಗಳನ್ನು ನರೇಂದ್ರ ಎಂಬಾತನ ಮೂಲಕ ಪುಣೆಯಲ್ಲಿ ಮಾರಾಟ ಮಾಡಲು ಸಂಚು ರೂಪಿಸಿದ್ದ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಟಿವಿ ಶೋ ರೂಂನ ಒಳಾಂಗಣ ವಿನ್ಯಾಸಕ್ಕೆ ಬಂದಿದ್ದ ಬಡಗಿ, ಅಲ್ಲಿ ಸಂಗ್ರಹಿಸಿ ಇಟ್ಟಿದ್ದ ₹ 3.66 ಲಕ್ಷ ಮೌಲ್ಯದ 20 ಎಲ್ಇಡಿ ಟಿ.ವಿಗಳನ್ನು ಕಳವು ಮಾಡಲು ಯತ್ನಿಸಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ!</p>.<p>ರಾಜಸ್ಥಾನದ ನಾಗೋರ್ ನಿವಾಸಿ ದೇವಾರಾಂ (22) ಬಂಧಿತ ಆರೋಪಿ. ಕದ್ದೊಯ್ದಿದ್ದ ಟಿವಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕೃತ್ಯದಲ್ಲಿ ಭಾಗಿಯಾಗಿದ್ದ ನರೇಂದ್ರ ಎಂಬಾತ ಸೇರಿ ಇತರ ಇಬ್ಬರಿಗಾಗಿ ಬಂಡೇಪಾಳ್ಯ ಠಾಣೆ ಪೊಲೀಸರು ಹುಡುಕಾಡುತ್ತಿದ್ದಾರೆ.</p>.<p>ಚಂದಾಪುರದಲ್ಲಿ ದುರ್ಗಾರಾಂ ಎಂಬುವರು ಥಾಮ್ಸನ್ ಕಂಪನಿಯ ಟಿವಿ ಶೋ ರೂಂ ಆರಂಭಿಸುವ ಉದ್ದೇಶದಿಂದ ತಮ್ಮ ಅಂಗಡಿಯಲ್ಲಿ ಮರಗೆಲಸ ಮಾಡಿಸುತ್ತಿದ್ದರು. ಒಳಭಾಗದಲ್ಲಿ ಕೆಲಸಪೂರ್ಣಗೊಂಡ ಬಳಿಕ ಹೊಸ ಟಿವಿಗಳನ್ನು ಶೋ ರೂಂ ತಂದು ಇಡಲಾಗಿತ್ತು. ಅಂಗಡಿ ಹೊರಭಾಗದಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ, 20 ಟಿವಿ<br />ಗಳನ್ನು ಕದ್ದು, ಮಾಗಡಿ ರಸ್ತೆಯ ಟೋಲ್ಗೇಟ್ಗೆ ಬಳಿ ತಾನು ನೆಲೆಸಿದ್ದ ಬಾಡಿಗೆ ಮನೆಯಲ್ಲಿ ಇಟ್ಟಿದ್ದ. ಬಳಿಕ ಅವುಗಳನ್ನು ನರೇಂದ್ರ ಎಂಬಾತನ ಮೂಲಕ ಪುಣೆಯಲ್ಲಿ ಮಾರಾಟ ಮಾಡಲು ಸಂಚು ರೂಪಿಸಿದ್ದ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>