‘ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಎಂ.ಜಿ. ರಸ್ತೆಯ ಶಾಖೆಯಲ್ಲಿರುವ ನಿಗಮದ ಖಾತೆಗೆ ಸಂಬಂಧಪಟ್ಟಂತೆ ಚೆಕ್ ಸ್ವೀಕರಿಸಲು, ಠೇವಣಿ ರಶೀದಿ ಪಡೆಯಲು, ಒವರ್ ಡ್ರಾಫ್ಟ್ ದಾಖಲೆ ಹಾಗೂ ಇತರೆ ದಾಖಲೆಗಳ ಪಡೆಯಲು ಕಿರಿಯ ಲೆಕ್ಕ ಅಧಿಕಾರಿ ಶಿವಕುಮಾರ್ (ಉದ್ಯೋಗಿ ಸಂಖ್ಯೆ–18163) ಅವರಿಗೆ ಅಧಿಕಾರ ನೀಡಲಾಗಿದೆ’ ಎಂಬುದಾಗಿ ಪದ್ಮನಾಭ ಅವರು ಮೇ 4ರಂದು ಬ್ಯಾಂಕ್ಗೆ ಪತ್ರ ಬರೆದಿದ್ದರು. ಈ ಪತ್ರ ಆಧರಿಸಿ ತನಿಖೆ ನಡೆದಿದೆ. ಶಿವಕುಮಾರ್ ಯಾರು ಎಂಬುದನ್ನು ಪತ್ತೆ ಮಾಡಲಾಗಿದೆ. ಆತನನ್ನು ವಿಚಾರಣೆ ನಡೆಸಿದರೆ, ಮತ್ತಷ್ಟು ಮಾಹಿತಿ ಲಭ್ಯವಾಗಲಿದೆ’ ಎಂದು ತಿಳಿಸಿವೆ.