ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಆಸ್ಪತ್ರೆಯ ಹೃದಯ ರೋಗಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ರಂಜನ್ ಶೆಟ್ಟಿ
ಮಾತನಾಡಿ, ‘ವ್ಯಕ್ತಿ ಪಾರ್ಶ್ವವಾಯು ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ರಕ್ತ ತಿಳಿಗೊಳಿಸಲು ಔಷಧ ನೀಡಿದ
ಪರಿಣಾಮ ಸಂಕೀರ್ಣ ಸಮಸ್ಯೆ ಕಾಣಿಸಿಕೊಂಡು, ಮೂತ್ರದಲ್ಲಿ ರಕ್ತಸ್ರಾವ ಉಂಟಾಯಿತು. ಅಂತಿಮವಾಗಿ ಹೃದಯದ ಎಡ ಹೃತ್ಕರ್ಣಕ್ಕೆ‘ಕಾರ್ಡಿಯಾಕ್ ಅಕ್ಲೂಡರ್’ ಸಾಧನ ಅಳವಡಿಸುವ ಮೂಲಕ ರಕ್ತಸ್ರಾವವನ್ನು ತಡೆಯಲಾಯಿತು’ ಎಂದರು.