ಪ್ರಾಧ್ಯಾಪಕ ಸುರೇಶ್ ನಾಗಲಮಡಿಕೆ, ‘ಮೊಗಳ್ಳಿ ಅವರ ನಾನೆಂಬುದು ಕಿಂಚಿತ್ತು ಕಥನವು ಅಂತರಂಗ ಹಾಗೂ ಅಂತಃಕರಣದ ಕಥನವಾಗಿದೆ. ಇದು ಹಲವು ಬಗೆಯ ಮನುಷ್ಯರ ಕಥನವಾಗಿದೆ. ಇದರಲ್ಲಿ ಬಳಸುವ ಭಾಷೆಗೆ ವಿಶಿಷ್ಟವಾದ ರೂಪಕ ಶಕ್ತಿ ನೀಡಿದ್ದಾರೆ. ಈ ಕೃತಿಯ ಕೊನೆಯವರೆಗೂ ತಾಯಿ ಕಾರುಣ್ಯದ ರೂಪಕವಾದರೆ, ಮತ್ತೊಂದು ತುದಿಯಲ್ಲಿ ತಂದೆ ಕ್ರೌರ್ಯದ ರೂಪಕವಾಗಿದ್ದಾರೆ. ತಾಯಿ ಜನಪದ, ಅಧ್ಯಾತ್ಮ ಜೀವಿಯಾಗಿ ಕಂಡರೆ, ತಂದೆ ಕೊನೆಯವರೆಗೂ ಕ್ರೂರಿಯಾಗಿ ಕಾಣುವ ಬಗೆ ನಮಗೆ ಬೇರೆ ಬೇರೆ ಆಲೋಚನೆ ತಂದು ಕೊಡುತ್ತದೆ’ ಎಂದರು.