ಕಾಂಗ್ರೆಸ್ ಮುಖಂಡ ಶಂಕರ್ ಗುಹಾ ದ್ವಾರಕನಾಥ್ ಅವರೊಂದಿಗೆ ಶುಕ್ರವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ತೇಜಸ್ವಿ ಸೂರ್ಯ ಮತ್ತು ಶಾಸಕ ರವಿ ಸುಬ್ರಮಣ್ಯ ಅವರು ಇತ್ತೀಚೆಗೆ ಸಹಕಾರಿ ಚಿಂತನ– ಮಂಥನ ಸಭೆ ಆಯೋಜಿಸಿದ್ದರು. ಅಲ್ಲಿಗೆ ತೆರಳಿದ್ದ ಎರಡೂ ಬ್ಯಾಂಕ್ಗಳ ಸಂತ್ರಸ್ತ ಠೇವಣಿದಾರರನ್ನು ಗೂಂಡಾಗಳು ಎಂದು ಅವಮಾನಿಸಿ, ದೌರ್ಜನ್ಯ ನಡೆಸಲಾಗಿದೆ’ ಎಂದು ದೂರಿದರು.