‘ಎಂದಿನಂತೆ ಬೆಳಿಗ್ಗೆ 7 ಗಂಟೆಗೇ ಹೊಲಕ್ಕೆ ಹೋಗಿದ್ದ ಪತಿ, ತುಂಬ ಹೊತ್ತಾದರೂ ಮನೆಗೆ ಬರಲಿಲ್ಲ. ಹೀಗಾಗಿ, ಅವರನ್ನು ಕರೆದುಕೊಂಡು ಬರುವಂತೆ ಮನೆ ಕೆಲಸದಾತ ನರಸಿಂಹಯ್ಯನನ್ನು ಹೊಲಕ್ಕೆ ಕಳುಹಿಸಿದ್ದೆ. ಆತ ಕರೆ ಮಾಡಿ ಪತಿ ಕೊಲೆಯಾಗಿರುವ ವಿಷಯ ತಿಳಿಸಿದ’ ಎಂದು ಮೃತರ ಪತ್ನಿ ಪುಟ್ಟಮ್ಮ ಹೇಳಿಕೆ ಕೊಟ್ಟಿರುವುದಾಗಿ ಪೀಣ್ಯ ಪೊಲೀಸರು ತಿಳಿಸಿದ್ದಾರೆ.