ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು
Published 18 ಏಪ್ರಿಲ್ 2024, 20:09 IST
Last Updated 18 ಏಪ್ರಿಲ್ 2024, 20:09 IST
ಅಕ್ಷರ ಗಾತ್ರ

‘ಜನತಂತ್ರ ವ್ಯವಸ್ಥೆಯಲ್ಲಿ ಮಾಧ್ಯಮ ಹಾಗೂ ಪತ್ರಕರ್ತರು’ ವಿಶೇಷ ಉಪನ್ಯಾಸ: ಸುಧೀಂದ್ರ ಕುಲಕರ್ಣಿ, ಉದ್ಘಾಟನೆ: ಲಿಂಗರಾಜ ಗಾಂಧಿ, ಅಧ್ಯಕ್ಷತೆ: ಶಿವಾನಂದ ತಗಡೂರು, ಆಶಯ ನುಡಿ: ಅನಂತ ಚಿನಿವಾರ, ಎನ್. ನರಸಿಂಹಮೂರ್ತಿ, ಆಯೋಜನೆ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗ, ಬೆಂಗಳೂರು ನಗರ ವಿಶ್ವವಿದ್ಯಾಲಯ, ಸ್ಥಳ: ಸೆಮಿನಾರ್ ಹಾಲ್, ಜ್ಞಾನಜ್ಯೋತಿ ಸಭಾಂಗಣ, ಸೆಂಟ್ರಲ್ ಕಾಲೇಜಿನ ಆವರಣ, ಬೆಳಿಗ್ಗೆ 10.30

ಸಂಗೀತ ಕಛೇರಿ: ಬೆಳಿಗ್ಗೆ 10.30: ಭಕ್ತಿ ಗೀತೆಗಳು: ಸಂಗಾತಿ ಸಮಾಜದ ಸದಸ್ಯರಿಂದ, ದೇವರನಾಮ, ಹಿಂದೂಸ್ತಾನಿ ಸಂಗೀತ ಕಛೇರಿ: ಗಾಯನ: ಪಿ. ಚೈತ್ರ ಗೋಪಿನಾಥ್, ಹಾರ್ಮೋನಿಯಂ: ಉಮಾಕಾಂತ್ ಪುರಾಣಿಕ್, ತಬಲಾ: ಗೋಪಿನಾಥ್ ಎಚ್.ಎಸ್., ಆಯೋಜನೆ ಮತ್ತು ಸ್ಥಳ: ಸಮಾಜ ಸೇವಾ ಸಂಘ, ಜಯನಗರ, ಸಂಜೆ 6.30

‘ವಾಯ್ಸ್‌ ಆಫ್‌ ದಿ ನೇಷನ್‌’, 2024ರ ಲೋಕಸಭಾ ಚುನಾವಣೆ–‘ಪ್ರಚಲಿತ ರಾಷ್ಟ್ರೀಯ ವಿದ್ಯಮಾನಗಳ’ ಕುರಿತು ಉಪನ್ಯಾಸ, ‘ಕರ್ನಾಟಕದ 28 ಸಂಸದರ ರಿಪೋರ್ಟ್‌ ಕಾರ್ಡ್‌’ ಬಿಡುಗಡೆ: ಭಾಷಣಕಾರರು: ಪರಕಾಲ ಪ್ರಭಾಕರ, ಸಲೀಲ್ ಶೆಟ್ಟಿ, ಆಕಾರ್ ಪಟೇಲ್, ಮಲ್ಲಿಕಾ ಘಂಟಿ, ಮಾವಳ್ಳಿ ಶಂಕರ್, ನಿರಂಜನ ಆರಾಧ್ಯ, ಇಂದೂಧರ ಹೊನ್ನಾಪುರ, ಎ.ಆರ್. ವಾಸವಿ, ಆಯೋಜನೆ: ಸಂವಿಧಾನದ ಹಾದಿಯಲ್ಲಿ, ಸ್ಥಳ: ಕ್ಯಾಪಿಟಲ್ ಹೋಟೆಲ್, ರಾಜಭವನ ರಸ್ತೆ, ಬೆಳಿಗ್ಗೆ 11

‘ಇದಿತ್ರಿ’ ಕಾರ್ಯಕ್ರಮದ ಉದ್ಘಾಟನೆ: ಚಂದ್ರಶೇಖರ್ ಕಂಬಾರ, ಅತಿಥಿಗಳು: ನಾಗೇಶ್ ವಿ. ಬೆಟ್ಟಕೋಟೆ, ಗೋನಾಳ ಭೀಮಪ್ಪ, ಅಧ್ಯಕ್ಷತೆ: ಸೋಮಶೇಖರ್ ಎ.ಆರ್., ಆಯೋಜನೆ: ದಿವ್ಯಜ್ಯೋತಿ ವಿದ್ಯಾ ಕೇಂದ್ರ, ಯಲಹಂಕ ನ್ಯೂಟೌನ್, ಬೆಳಿಗ್ಗೆ 11.30

ಬೆಂಗಳೂರು ಕರಗೋತ್ಸವ: ದೇವರ ನಾಮ–ಭಜನೆ: ಕನಕಶ್ರೀ ಮಹಿಳಾ ಸಂಘ, ಸಾಂಸ್ಕೃತಿಕ ಕಾರ್ಯಕ್ರಮಗಳು: ರೇಖಾ ಜಗದೀಶ್ ತಂಡ, ಆಯೋಜನೆ ಮತ್ತು ಸ್ಥಳ: ಧರ್ಮರಾಯಸ್ವಾಮಿ ದೇವಸ್ಥಾನ ತಿಗಳರಪೇಟೆ, ಸಂಜೆ 5ರಿಂದ

ನೃತ್ಯೋತ್ಸವ–2024: ಯಕ್ಷಗಾನ ಪ್ರದರ್ಶನ, ಕುಚಿಪುಡಿ ನೃತ್ಯ ಪ್ರದರ್ಶನ: ಅವಿಜಿತ್‌ ದಾಸ್, ಕಥಕ್ ನೃತ್ಯ ಪ್ರದರ್ಶನ: ಪಿಯೂಷ್ ಚೌವ್ಹಾಣ್, ಆಯೋಜನೆ: ಎಂಇಎಸ್ ಕಲಾವೇದಿ, ಸ್ಥಳ: ಎಂಇಎಸ್ ಕಾಲೇಜು ಸಭಾಂಗಣ, ಮಲ್ಲೇಶ್ವರ, ಸಂಜೆ 5ರಿಂದ

‘ಎಟರ್ನಲ್‌ ಎಕೋಸ್‌’ ಎಂ.ಎಸ್. ಚಂದ್ರಶೇಖರ್ ಅವರ ಜನ್ಮಶತಮಾನೋತ್ಸವ ಕಲಾತ್ಮಕ ಪಯಣ: ಉದ್ಘಾಟನೆ: ಎಚ್.ಎನ್. ಸುರೇಶ್, ಅತಿಥಿಗಳು: ಚೂಡಾಮಣಿ ನಂದಗೋಪಾಲ್, ಎಂ.ಜೆ. ಕಮಲಾಕ್ಷಿ, ಅಧ್ಯಕ್ಷತೆ: ಬಿ.ಎಲ್. ಶಂಕರ್, ಉಪಸ್ಥಿತಿ: ಬಾಲಮುರಳಿ ಚಂದ್ರಶೇಖರ್, ಆಯೋಜನೆ ಮತ್ತು ಸ್ಥಳ: ಕರ್ನಾಟಕ ಚಿತ್ರಕಲಾ ಪ‍ರಿಷತ್ತು, ಕುಮಾರಕೃಪಾ ರಸ್ತೆ, ಸಂಜೆ 5.30

ಅಕ್ಕಮಹಾದೇವಿ ಜಯಂತಿ: ಅಧ್ಯಕ್ಷತೆ: ಗೀತಾ ಜಯಂತ್, ‘ಅಕ್ಕಮಹಾದೇವಿ ವಚನಗಳಲ್ಲಿ ಆತ್ಮಸಾಕ್ಷಿ ಪ್ರಜ್ಞೆ’ ಕುರಿತು ಉಪನ್ಯಾಸ: ಅಂಬಿಕಾ ಚಂದ್ರಶೇಖರ್, ಉಪಸ್ಥಿತಿ: ಕೆ.ವಿ. ನಾಗರಾಜಮೂರ್ತಿ, ದಿಬ್ಬೂರು ಎಸ್. ಗಿರೀಶ್, ಪ್ರಮೀಳಾ ಗರಡಿ, ಆಯೋಜನೆ: ಬೆಂಗಳೂರು ನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಸ್ಥಳ: ಜೆಎಸ್ಎಸ್ ಸಭಾಂಗಣ, ಜಯನಗರ, ಸಂಜೆ 5.30

70ನೇ ಶ್ರೀರಾಮನವಮಿ ಸಂಗೀತ ಮಹೋತ್ಸವ: ಭರತನಾಟ್ಯ ಪ್ರದರ್ಶನ: ಪ್ರಿಯಾಂಕ ರಾಧಾಕೃಷ್ಣ ಮತ್ತು ತಂಡ, ಐಶ್ವರ್ಯ ನಿತ್ಯಾನಂದ, ‘ಗೀತ ಗೋವಿಂದ’ ನೃತ್ಯ ರೂಪಕ: ನಿರ್ದೇಶನ: ರಾಧಶ್ರೀಧರ್, ಆಯೋಜನೆ ಹಾಗೂ ಸ್ಥಳ: ಕಾರಂಜಿ ಆಂಜನೇಯಸ್ವಾಮಿ ದೇವಸ್ಥಾನ, ಬಸವನಗುಡಿ, ಸಂಜೆ 5.30

ರಾಮನವಮಿ ಆಚರಣೆ ಪ್ರಯುಕ್ತ ಸಂಗೀತ ಕಛೇರಿ: ಗಾಯನ: ಆರ್. ಪವನ್ ರಂಗಾಚಾರ್, ಪಿಟೀಲು: ಎಂ.ಎಸ್. ಗೋವಿಂದ್ ಸ್ವಾಮಿ, ಮೃಂದಗ: ಬಿ.ಆರ್. ಶ್ರೀನಿವಾಸ್, ಆಯೋಜನೆ: ಭಾರತೀಯ ಶಿಕ್ಷಣ ಸಮಿತಿ, ಸ್ಥಳ: ಪ್ರೊ.ಎಂ.ಪಿ.ಎಲ್. ಶಾಸ್ತ್ರಿ ಆಡಿಟೋರಿಯಂ, ಗಾಂಧಿನಗರ ಪಿ.ಯು. ಕಾಲೇಜು ಆವರಣ, ಸಂಜೆ 6

ರಾಮನವಮಿ ಸಂಗೀತೋತ್ಸವ–2024: ಸಂಜೆ 5ರಿಂದ 6 ಗಂಟೆ: ಸುರಭಿ ಎಸ್‌ ಮತ್ತು ತಂಡದಿಂದ ಸಂಗೀತ ಕಾರ್ಯಕ್ರಮ, ವಿಶೇಷ ಹಿಂದೂಸ್ತಾನಿ ಸಂಗೀತ ಕಛೇರಿ: ವೆಂಕಟೇಶ್ ಕುಮಾರ್, ಕೇಶವ ಜೋಷಿ, ಸತೀಶ್ ಕೊಳ್ಳಿ, ಆಯೋಜನೆ: ಶ್ರೀರಾಮ ಸೇವಾ ಮಂಡಲಿ, ರಾಮನವಮಿ ಸೆಲೆಬ್ರೇಷನ್‌ ಟ್ರಸ್ಟ್, ಸ್ಥಳ: ಕೋಟೆ ಪ್ರೌಢಶಾಲೆ ಮೈದಾನ, ಚಾಮರಾಜಪೇಟೆ, ಸಂಜೆ 6.30

‌ಶ್ರೀರಾಮೋತ್ಸವ: ಸುಗಮ ಸಂಗೀತ: ಸುಚೇತನ್ ರಂಗಸ್ವಾಮಿ ಮತ್ತು ತಂಡ, ಆಯೋಜನೆ ಹಾಗೂ ಸ್ಥಳ: ಜಯರಾಮ ಸೇವಾ ಮಂಡಳಿ, 1ನೇ ಮುಖ್ಯ ರಸ್ತೆ, 8ನೇ ಬಡಾವಣೆ, ಜಯನಗರ, ಸಂಜೆ 6.30

‘ಹರಿನಾಮ ಸಂಕೀರ್ತನೆ’: ಗಾಯನ: ಭಾವನಾ ಉಮೇಶ್, ಪಿಟೀಲು: ಎಂ.ಎನ್. ಸತ್ಯನಾರಾಯಣ, ಮೃದಂಗ: ಶ್ರೀನಿವಾಸ್ ಅನಂತರಾಮಯ್ಯ, ಆಯೋಜನೆ: ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್, ಸ್ಥಳ: ಅಭಯ ಲಕ್ಷ್ಮಿ ನರಸಿಂಹಸ್ವಾಮಿ ದೇವಸ್ಥಾನ, ತ್ಯಾಗರಾಜನಗರ, ಸಂಜೆ 6.30

‘ಹರಿದಾಸ ವೈಭವ’: ಗಾಯನ: ಅನನ್ಯ ಬೆಳವಾಡಿ, ಕೀ–ಬೋರ್ಡ್: ಅಮಿತ್‌ ಶರ್ಮಾ, ತಬಲಾ: ಸರ್ವೋತ್ತಮ, ಆಯೋಜನೆ ಮತ್ತು ಸ್ಥಳ: ಪ್ರಶಾಂತ ಗಣಪತಿ ದೇವಸ್ಥಾನ, ಪ್ರಶಾಂತನಗರ, ಸಂಜೆ 6.30

‘ಮಹಾಭಾರತ’ ಪ್ರವಚನ: ಜಗನ್ನಾಥಾಚಾರ್ಯ, ಆಯೋಜನೆ ಮತ್ತು ಸ್ಥಳ: ರಾಘವೇಂದ್ರ ಸ್ವಾಮಿ ಮಠ, ಸುಧೀಂದ್ರನಗರ, ಸಂಜೆ 7

‘ಮಿಸ್ಟರ್ ರಾವ್ ಆ್ಯಂಡ್‌ ಅಸೋಸಿಯೇಟ್ಸ್’ ನಾಟಕ ಪ್ರದರ್ಶನ: ರಚನೆ: ಭೀಷ್ಮ ರಾಮಯ್ಯ, ನಿರ್ದೇಶನ: ಬಾಷ್ ರಾಘವೇಂದ್ರ, ಆಯೋಜನೆ: ಅಂತರಂಗ ಬಹಿರಂಗ ತಂಡ, ಸ್ಥಳ: ಯುವಪಥ, ಜಯನಗರ 4ನೇ ಬ್ಲಾಕ್, ಸಂಜೆ 7.30

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT