ಕಸಾಪ ಅಧ್ಯಕ್ಷ ಮಹೇಶ ಜೋಶಿ, ‘ಸಾಮಾಜಿಕ ಬದಲಾವಣೆಗೆ, ದೇಶದ ಸಂಪತ್ತಿಗೆ ವಿದ್ಯೆಯು ಮೂಲ ಎಂದು ಅರಿತ ನಾಲ್ವಡಿ ಅವರು, 1915ರಲ್ಲಿ ಕಡ್ಡಾಯ ಶಿಕ್ಷಣವನ್ನು ಜಾರಿಗೊಳಿಸಿದರು. ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣವನ್ನು ಉಚಿತವಾಗಿಸಿದರು. ಶಿಕ್ಷಣವನ್ನು ಗ್ರಾಮೀಣ ಪ್ರದೇಶಕ್ಕೆ ವಿಸ್ತರಿಸಿದರು. ಮಹಿಳೆಯರ ವಿದ್ಯಾಭ್ಯಾಸಕ್ಕೂ ಪ್ರೋತ್ಸಾಹಿಸಿದರು. 1916ರಲ್ಲಿ ಮೈಸೂರು ವಿಶ್ವವಿದ್ಯಾಲಯವನ್ನು ಸ್ಥಾಪಿಸಿದ್ದರಿಂದ ನಾಡಿನಲ್ಲಿ ಹೊಸಶಕೆ ಆರಂಭವಾದಂತಾಯಿತು. ಭಾರಿ ಆಸ್ಪತ್ರೆಗಳು ಅವರ ಕಾಲದಲ್ಲಿ ನಿರ್ಮಾಣಗೊಂಡವು’ ಎಂದು ಹೇಳಿದರು.