ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ‘ಆಗಾಗ ಕತ್ತಲು ಕವಿಯುವ ನಮ್ಮ ಸಮಾಜಕ್ಕೆ ಸಾಹಿತ್ಯದ ದೀಪಗಳು ಬೇಕಾಗುತ್ತವೆ. ನಮ್ಮ ಕಾಲದ ಸಂದಿಗ್ಧಗಳನ್ನು ವ್ಯಕ್ತಿ ನೆಲೆಯಲ್ಲಿ, ಸಮಷ್ಟಿ ನೆಲೆಯಲ್ಲಿ ಹೇಗೆ ವಿವರಿಸಬೇಕೆಂಬ ಸವಾಲು ಲೇಖಕರಿಗೆ ಇದೆ. ಅಂಕಣ, ಕತೆ, ಕಾವ್ಯ, ಲೇಖನವೇ ಬೇರೆ, ಪ್ರಬಂಧವೇ ಬೇರೆ. ಪ್ರಬಂಧಕಾರ ಕತೆಗಾರನಾಗುವ ಅಪಾಯದಿಂದ ತಪ್ಪಿಸಬೇಕು. ಹಾಗೆಯೇ, ಲೇಖನ ಪ್ರಬಂಧವಾಗದಂತೆ ನೋಡಿಕೊಳ್ಳಬೇಕು’ ಎಂದರು.