<p><strong>ನೆಲಮಂಗಲ:</strong> ಪಟ್ಟಣದ ವಾಜರಹಳ್ಳಿ ರಸ್ತೆಯ ಶೇಷು ಬಡಾವಣೆಯ ರಸ್ತೆ ದುರಸ್ತಿಗೆ ಗುದ್ದಲಿ ಪೂಜೆ ನಡೆದರೂ ಕಾಮಗಾರಿ ನಡೆದಿಲ್ಲ.</p>.<p>ಡಿ. 4ರಂದು ಪೂಜೆಯ ದಿನ ರಸ್ತೆಯನ್ನು ಜೆಸಿಬಿ ಮೂಲಕ ಅಗೆದುಹಾಕಲಾಯಿತು. ಈಗ ಜನರಿಗೆ ಹೊಸರಸ್ತೆಯೂ ಇಲ್ಲ. ಮಣ್ಣಿನ ರಸ್ತೆಯೂ ಇಲ್ಲವಾಗಿದೆ.</p>.<p>ದಪ್ಪ ಕಲ್ಲು, ಮಣ್ಣಿನ ಹೆಂಟೆಗಳು ರಸ್ತೆಯೆಲ್ಲ ಹರಡಿಕೊಂಡು ನಡೆದಾಡುವುದೂ ಕಷ್ಟವಾಗಿದೆ. ದ್ವಿಚಕ್ರ ವಾಹನ ಸವಾರರೂ<br />ಕಷ್ಟಪಡುತ್ತಿದ್ದಾರೆ.</p>.<p>‘ಬಡಾವಣೆಯ ಕೊನೆಗೆ ಹೋದರೆ ರಸ್ತೆಯನ್ನೆಲ್ಲ ಗಿಡ ಗಂಟೆಗಳು ಆವರಿಸಿಕೊಂಡು, ಕಾಲುದಾರಿ ಮಾತ್ರ ಕಾಣುತ್ತದೆ. ಇದೊಂದು ಮೂಗಿಗೆ ತುಪ್ಪ ಸವರುವ ಕೆಲಸದಂತಾಗಿದೆ’ ಎನ್ನುತ್ತಾರೆ ಶ್ಯಾಮರಾವ್.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>ನೆಲಮಂಗಲ:</strong> ಪಟ್ಟಣದ ವಾಜರಹಳ್ಳಿ ರಸ್ತೆಯ ಶೇಷು ಬಡಾವಣೆಯ ರಸ್ತೆ ದುರಸ್ತಿಗೆ ಗುದ್ದಲಿ ಪೂಜೆ ನಡೆದರೂ ಕಾಮಗಾರಿ ನಡೆದಿಲ್ಲ.</p>.<p>ಡಿ. 4ರಂದು ಪೂಜೆಯ ದಿನ ರಸ್ತೆಯನ್ನು ಜೆಸಿಬಿ ಮೂಲಕ ಅಗೆದುಹಾಕಲಾಯಿತು. ಈಗ ಜನರಿಗೆ ಹೊಸರಸ್ತೆಯೂ ಇಲ್ಲ. ಮಣ್ಣಿನ ರಸ್ತೆಯೂ ಇಲ್ಲವಾಗಿದೆ.</p>.<p>ದಪ್ಪ ಕಲ್ಲು, ಮಣ್ಣಿನ ಹೆಂಟೆಗಳು ರಸ್ತೆಯೆಲ್ಲ ಹರಡಿಕೊಂಡು ನಡೆದಾಡುವುದೂ ಕಷ್ಟವಾಗಿದೆ. ದ್ವಿಚಕ್ರ ವಾಹನ ಸವಾರರೂ<br />ಕಷ್ಟಪಡುತ್ತಿದ್ದಾರೆ.</p>.<p>‘ಬಡಾವಣೆಯ ಕೊನೆಗೆ ಹೋದರೆ ರಸ್ತೆಯನ್ನೆಲ್ಲ ಗಿಡ ಗಂಟೆಗಳು ಆವರಿಸಿಕೊಂಡು, ಕಾಲುದಾರಿ ಮಾತ್ರ ಕಾಣುತ್ತದೆ. ಇದೊಂದು ಮೂಗಿಗೆ ತುಪ್ಪ ಸವರುವ ಕೆಲಸದಂತಾಗಿದೆ’ ಎನ್ನುತ್ತಾರೆ ಶ್ಯಾಮರಾವ್.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>