ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, ‘₹ 10 ಕೋಟಿ ಮೊತ್ತ ಸಾಕಾಗುತ್ತದೆಯೇ, ಸ್ಮಶಾನ ಇಲ್ಲದಿರುವ ಕಡೆ ಏನು ಮಾಡಿದ್ದೀರಿ’ ಎಂದು ಪ್ರಶ್ನಿಸಿದರಲ್ಲದೆ, ‘ಈ ಪ್ರಮಾಣ ಪತ್ರ ಅಪೂರ್ಣವಾಗಿದೆ. ಈ ಕುರಿತಂತೆ ಸಮಗ್ರ ಕಾರ್ಯನೀತಿಯ ವರದಿ ನೀಡಿ’ ಎಂದು ಸೂಚಿಸಿ, ವಿಚಾರಣೆಯನ್ನು 2019ರ ಜನವರಿ 16ಕ್ಕೆ ಮುಂದೂಡಿದರು.