‘ರಮೇಶ್ ಮತ್ತು ಮಾಣಿಕ್ ಚಾಂದ್ ಎಂಬುವರು ಹಣ ತೆಗೆದುಕೊಂಡು ಹೊರಟಿದ್ದರು. ತಾವು ಚಿನ್ನಾಭರಣ ವ್ಯಾಪಾರಿಗಳೆಂದು ಅವರು ಹೇಳಿಕೊಂಡರು. ಹಣವನ್ನು ಮನೆಗೆ ತೆಗೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿದರು. ಆದರೆ, ಹಣಕ್ಕೆ ಯಾವುದೇ ದಾಖಲೆ ನೀಡಲಿಲ್ಲ. ಹೀಗಾಗಿ, ಹಣವನ್ನು ಜಪ್ತಿ ಮಾಡಲಾಗಿದೆ. ನ್ಯಾಯಾಲಯದಿಂದಲೇ ಅವರು ಹಣ ಬಿಡಿಸಿಕೊಳ್ಳಬೇಕು’ ಎಂದೂ ತಿಳಿಸಿದರು.