ಮೃತನ ಪತ್ನಿ, ಈ ಸಂಬಂಧ ಬ್ಯಾಟರಾಯನಪುರ ಠಾಣೆಗೆ ದೂರು ನೀಡಿದ್ದಾರೆ. ‘ಶಿಕ್ಷಕಿಯಾಗಿರುವ ನಾನು ಬೆಳಿಗ್ಗೆ 9 ಗಂಟೆಗೆ ಮನೆಯಿಂದ ಹೋಗಿದ್ದೆ. ಆಗ ಪತಿ ಮನೆಯಲ್ಲೇ ಇದ್ದರು.ಮಧ್ಯಾಹ್ನ 2.30ರ ಸುಮಾರಿಗೆ ಕರೆ ಮಾಡಿದ ನನ್ನ ತಾಯಿ, ಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿಸಿದರು. ತಕ್ಷಣ ಮನೆಗೆ ವಾಪಸಾದೆ. ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಪತಿ ಬರೆದಿಟ್ಟಿದ್ದ ಪತ್ರವೊಂದು ಸಿಕ್ಕಿದೆ. ‘ಕೆಲಸ ಮಾಡುತ್ತಿದ್ದ ಕಂಪನಿಯ ಮಾಲೀಕ ಅಲೋಕ್ ಕುಮಾರ್ ಮತ್ತು ಎಚ್ಆರ್ ವಿಭಾಗದ ಮೆನೇಜರ್ ತಿಮ್ಮಯ್ಯ ನೀಡುತ್ತಿದ್ದ ಮಾಸಿಕ ಕಿರುಕುಳ ನನ್ನ ಸಾವಿಗೆ ಕಾರಣ’ ಎಂದೂ ಪತ್ರದಲ್ಲಿ ಬರೆದು ಸಹಿ ಹಾಕಿದ್ದಾರೆ’ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.