‘ಕೌಟುಂಬಿಕ ವಿಚಾರಕ್ಕೆ ಮನೆಯಲ್ಲಿ ತಂದೆ ಹಾಗೂ ತಾಯಿ ನಡುವೆ ನಿತ್ಯ ಗಲಾಟೆ ನಡೆಯುತ್ತಿತ್ತು. ಮಂಗಳವಾರ ರಾತ್ರಿಯೂ ತಂದೆ ಬಸವರಾಜ್ (53) ಹಾಗೂ ತಾಯಿ ಭಾಗ್ಯಲಕ್ಷ್ಮಿ ಮಧ್ಯೆ ಜಗಳ ಆಗುತ್ತಿದ್ದ ವೇಳೆ ಯಶವಂತ್ ಮಧ್ಯ ಪ್ರವೇಶಿಸಿ ತಂದೆಗೆ ಬುದ್ಧಿಮಾತು ಹೇಳಿದ್ದರು. ನಾನು ಉದ್ಯೋಗ ಮಾಡಿಕೊಂಡು ಮನೆಗೆ ಬೇಕಾದ ಅಗತ್ಯ ಸಾಮಗ್ರಿ ತಂದು ಹಾಕುತ್ತಿದ್ದೇನೆ. ಕುಟುಂಬದ ಉದ್ದಾರಕ್ಕೆ ಶ್ರಮ ಹಾಕುತ್ತಿದ್ದೇನೆ. ಈ ರೀತಿ ಜಗಳದಿಂದ ಕಿರಿಕಿರಿ ಉಂಟಾಗುತ್ತಿದೆ ಎಂದು ಯಶವಂತ್ ಅವರು ತಂದೆಗೆ ಹೇಳಿದ್ದರು. ಆದರೂ ಕೇಳದೆ ಜಗಳ ಮುಂದುವರಿಸಿದ್ದರು. ಗಲಾಟೆ ವಿಕೋಪಕ್ಕೆ ತಿರುಗಿ, ಬಸವರಾಜ್ ಅವರು ಚಾಕುವಿನಿಂದ ಇರಿದಿದ್ದಾರೆ. ಬಲವಾದ ಪೆಟ್ಟು ಬಿದ್ದಿದ್ದರಿಂದ ಯಶವಂತ್ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.