ಸಚಿವ ರೇವಣ್ಣ ಮಾಡುವುದೆಲ್ಲಾ ಮಾಡಿದ್ದಾರೆ. ಇದೀಗ ಸರ್ಕಾರವನ್ನು ದೇವರು ರಕ್ಷಿಸಬೇಕು ಎಂದೆಲ್ಲ ಹೇಳಿದರೆ ಆಗಲ್ಲ. ಸರ್ಕಾರದಲ್ಲಿ ದೂರುಗಳೆಲ್ಲಾ ಇರುವುದು ರೇವಣ್ಣ ಮೇಲೆ. ಶಾಸಕರ ಅತೃಪ್ತಿಗೆ, ಸರ್ಕಾರ ಹೋಗುವುದಕ್ಕೆ ರೇವಣ್ಣ ಕಾರಣ. ಸರ್ಕಾರದ ಪ್ರಭಾವಿ ಸಚಿವನಾಗಿ ಎಲ್ಲಾ ತಪ್ಪುಗಳನ್ನು ಅವರು ಮಾಡಿದ್ದಾರೆ. ಈಗ ದೇವರ ದರ್ಶನ ಮಾಡಿದರೆ ಪ್ರಯೋಜನವಿಲ್ಲ. ಎಡ, ಬಲಗೈಯಲ್ಲಿ ನಾಲ್ಕು ನಾಲ್ಕು ಲಿಂಬೆಹಣ್ಣು ಹಿಡಿದುಕೊಂಡು ಹೋದರೂ ದೇವರು ರಕ್ಷಣೆ ಮಾಡಲ್ಲ ಎಂದು ವ್ಯಂಗ್ಯವಾಡಿದರು.