ಬೆಂಗಳೂರು: ‘ಮನೋವಿಜ್ಞಾನವನ್ನು ಕನ್ನಡದಲ್ಲಿ ಅಧ್ಯಯನ ಮಾಡಲು ಹೆಚ್ಚು ಅವಕಾಶಗಳು ಲಭ್ಯವಾಗಬೇಕು’ ಎಂದು ಚಿಂತಕ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಹೇಳಿದರು.
ಮಹಾರಾಣಿ ಅಮ್ಮಣ್ಣಿ ಮಹಿಳಾ ಕಾಲೇಜಿನಲ್ಲಿ ವಿನಾಯಕ ಗೋಕಾಕ್ ವಾಙ್ಮಯ ಟ್ರಸ್ಟ್ ಆಯೋಜಿಸಿದ್ದ ಮನೋವಿಜ್ಞಾನಿ ಡಾ.ಎಂ.ಬಸವಣ್ಣ ಅವರ ‘ಸಿಗ್ಮಂಡ್ ಫ್ರಾಯ್ಡ್’ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.
‘ಈ ವಿಷಯಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಮನೋವಿಜ್ಞಾನಿಗಳು ಕನ್ನಡದಲ್ಲೇ ಬರೆದರೆ ಕಲಿಕೆಗೆ ಅನುಕೂಲವಾಗಲಿದೆ. ವಿಜ್ಞಾನವನ್ನು ಇಂಗ್ಲಿಷ್ ಬದಲು ಕನ್ನಡದಲ್ಲಿ ಕಲಿಯುವ ಪ್ರಯತ್ನಗಳು ನಡೆಯಬೇಕಿವೆ’ ಎಂದು ಹೇಳಿದರು.
ಟ್ರಸ್ಟ್ ಕಾರ್ಯದರ್ಶಿ ಅನಿಲ್ ಗೋಕಾಕ್ ಮಾತನಾಡಿ, ‘ಇಂಗ್ಲಿಷ್ ಭಾಷೆಯನ್ನು ತ್ಯಜಿಸುವ ಉದ್ದೇಶ ಇದ್ದರೂ, ಅದನ್ನು ಚೆನ್ನಾಗಿ ಕಲಿಯುವ ಅಗತ್ಯವಿದೆ. ಏಕೆಂದರೆ, ಇಂಗ್ಲಿಷ್ನಲ್ಲಿರುವ ವಿಜ್ಞಾನದ ಪುಸ್ತಕಗಳನ್ನು ಕನ್ನಡಕ್ಕೆ ತರ್ಜುಮೆ ಮಾಡಬೇಕೆಂದರೆ ಇಂಗ್ಲಿಷ್ ಜ್ಞಾನ ಇರಬೇಕಾಗುತ್ತದೆ’ ಎಂದರು.