‘ತಮಿಳುನಾಡಿನ ಪ್ರಭು ಮತ್ತು ತಮಿಳು ಸೆಲ್ವಿ ದಂಪತಿ ಮಗನ ಜತೆಗೆ ಅಪಾರ್ಟ್ಮೆಂಟ್ನಲ್ಲಿ ನೆಲೆಸಿದ್ದರು. ದಂಪತಿ ನಡುವೆ ಕೌಟುಂಬಿಕ ವಿಚಾರಕ್ಕೆ ಜಗಳ ನಡೆಯುತ್ತಿತ್ತು. ಬುಧವಾರ ಜಗಳ ನಡೆದು ಘಟನೆಯಿಂದ ಬೇಸರಗೊಂಡ ತಮಿಳು ಸೆಲ್ವಿ, ಪತಿ ಕೆಲಸಕ್ಕೆ ತೆರಳಿದಾಗ ಫ್ಲ್ಯಾಟ್ ಬಾಗಿಲು ಹಾಗೂ ಕಿಟಕಿ ಲಾಕ್ ಮಾಡಿಕೊಂಡು ಮನೆಯಲ್ಲಿದ್ದ ಅಡುಗೆ ಸಿಲಿಂಡರ್ನಿಂದ ಅನಿಲವನ್ನು ಸೋರಿಕೆ ಮಾಡಿಕೊಂಡಿದ್ದಾರೆ. ಅನುಮಾನಗೊಂಡು ಪತಿ ಮನೆಗೆ ವಾಪಸ್ ಬಂದು ಬಾಗಿಲು ತಟ್ಟಿದ್ದಾರೆ. ಬಾಗಿಲು ತೆರೆಯದೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸೆಲ್ವಿ ಹೇಳಿದ್ದಾರೆ. ಗಾಬರಿಗೊಂಡ ಪ್ರಭು, ಮನೆಯ ಕಿಟಕಿ ಬಳಿ ಬಂದು ನೋಡಿದಾಗ ಗ್ಯಾಸ್ ವಾಸನೆ ಬರುತ್ತಿತ್ತು. ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿದ್ದರು’ ಎಂದು ಮೂಲಗಳು ತಿಳಿಸಿದೆ.