ಬೆಂಗಳೂರು: ಕ್ಷುಲ್ಲಕ ವಿಚಾರಕ್ಕೆ ಯುವಕನ ಮೇಲೆ ಹಲ್ಲೆ ನಡೆಸಿದ್ದ ಸುಡಾನ್ ದೇಶದ ಇಬ್ಬರನ್ನು ಯಲಹಂಕ ಉಪನಗರ ಪೊಲೀಸರು ಬಂಧಿಸಿದ್ದಾರೆ.
ಜ್ಯೋತಿನಗರದ ನಿವಾಸಿ ಸುಡಾನ್ ದೇಶದ ಒಸಮಾ ಮೋಮಿಯಾ ಅಬ್ರಿಮ್ (22) ಮತ್ತು ಅಹಮದ್ ಮೊಹಮದ್ (26) ಬಂಧಿತರು.
‘ರಾಜೀವ್ಗಾಂಧಿ ನಗರದ ನಿವಾಸಿ ಮಣಿಕಂಠ ಎಂಬ ಯುವಕನ ಮೇಲೆ ಅವರಿಬ್ಬರೂ ಹಲ್ಲೆ ನಡೆಸಿದ್ದರು. ಈ ಸಂಬಂಧ ಮಣಿಕಂಠ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ’ ಎಂದು ಪೊಲೀಸರು ತಿಳಿಸಿದರು.
ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಹೊಯ್ಸಳ ಸಿಬ್ಬಂದಿ ಸ್ಥಳಕ್ಕೆ ತೆರಳಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಮಾಹಿತಿ ನೀಡಿದರು.