‘ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯ ಅಂಜನಾಪುರ ಕೆರೆಯ ಬಳಿ ಸೈಯದ್ ನಫೀಝ್ ಕಬ್ಬಿನ ಹಾಲು ತಯಾರಿಸಿ, ಮಾರಾಟ ಮಾಡುತ್ತಿದ್ದರು. ಅಲ್ಲಿದ್ದ ಯಂತ್ರವನ್ನು ಮಾರ್ಚ್ 2ರಂದು ಇಬ್ಬರು ಕಳವು ಮಾಡಿದ್ದರು. ಕಳವು ಮಾಡಿದ ಯಂತ್ರವನ್ನು ಕಬ್ಬಿಣ ಖರೀದಿಸುವ ವ್ಯಾಪಾರಿಗೆ ಮಾರಾಟ ಮಾಡಿ ₹30 ಸಾವಿರ ಪಡೆದುಕೊಂಡಿದ್ದರು’ ಎಂದು ಪೊಲೀಸರು ಹೇಳಿದರು.