ಕನ್ನಡ ವಿಶ್ವವಿದ್ಯಾಲಯದ ಭಾಷಾಂತರ ಅಧ್ಯಯನ ವಿಭಾಗ ಮತ್ತು ಭಾಷಾಂತರ ಕೇಂದ್ರ ಹಾಗೂ ಸುರಾನ ಕಾಲೇಜು ಜಂಟಿಯಾಗಿ ನಗರದಲ್ಲಿ ಬುಧವಾರ ಹಮ್ಮಿಕೊಂಡ ಭಾಷಾಂತಕಾರರ ದ್ವಿತೀಯ ಸಮಾವೇಶ ಹಾಗೂ ರಾಷ್ಟ್ರೀಯ ವಿಚಾರಸಂಕಿರಣ ಉದ್ಘಾಟಿಸಿ, ಮಾತನಾಡಿದರು. ‘ಕನ್ನಡ ಸಂಸ್ಕೃತಿಯ ಅಸ್ಮಿತೆಯು ಸೃಜನಶೀಲ ಲೇಖಕರು ಹಾಗೂ ಭಾಷಾಂತರಕಾರರಿಂದ ವಿಸ್ತರಣೆಗೊಳ್ಳಲಿದೆ. ಸರ್ಕಾರ, ಖಾಸಗಿ ಸಂಸ್ಥೆಗಳು ಹಾಗೂ ವೈಯಕ್ತಿಕ ನೆಲೆಯಲ್ಲಿ ಭಾಷಾಂತರ ನಡೆಯುತ್ತಿದೆ. ಸಾಹಿತ್ಯಿಕ, ಶಾಸ್ತ್ರೀಯ ಹಾಗೂ ಶೈಕ್ಷಣಿಕ ಪಠ್ಯಗಳನ್ನು ಇತರೆ ಭಾಷೆಗಳಿಗೆ ಅನುವಾದ ಮಾಡಿಸುವ ಪ್ರಕ್ರಿಯೆ ಹೆಚ್ಚಬೇಕು’ ಎಂದು ತಿಳಿಸಿದರು.