ಬೆಂಗಳೂರು: ಕುಮಾರಸ್ವಾಮಿ ಲೇಔಟ್ ಠಾಣೆ ವ್ಯಾಪ್ತಿಯ ಮನೆಯೊಂದಕ್ಕೆ ನುಗ್ಗಿದ್ದ ದುಷ್ಕರ್ಮಿಗಳು, ವೃದ್ಧೆಯೊಬ್ಬರ ಕೈ–ಕಾಲು ಕಟ್ಟಿಹಾಕಿ ಚಿನ್ನಾಭರಣ ಹಾಗೂ ನಗದು ದೋಚಿದ್ದಾರೆ.
‘ಜ. 3ರ ದರೋಡೆ ಬಗ್ಗೆ ವೃದ್ಧೆಯ ಮಗಳು ದೂರು ನೀಡಿದ್ದಾರೆ. ದುಷ್ಕರ್ಮಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸರು ಹೇಳಿದರು. ‘57 ವರ್ಷ ವಯಸ್ಸಿನ ಶ್ರೀಲಕ್ಷ್ಮಿ ಅವರು ವೈದ್ಯೆಯಾಗಿರುವ ಮಗಳ ಜೊತೆ ವಾಸವಿದ್ದಾರೆ. ಜ. 3ರಂದು ಬೆಳಿಗ್ಗೆ ಮಗಳು ಎಂದಿನಂತೆ ಕ್ಲಿನಿಕ್ಗೆ ಹೋಗಿದ್ದರು’.
‘ಮನೆಗೆ ನುಗ್ಗಿದ್ದ ಆರೋಪಿಗಳು, ಶ್ರೀಲಕ್ಷ್ಮಿ ಮೇಲೆ ಹಲ್ಲೆ ಮಾಡಿದ್ದರು. ₹ 3.50 ಲಕ್ಷ ನಗದು, ₹ 4 ಲಕ್ಷ ಮೌಲ್ಯದ ಚಿನ್ನಾಭರಣ, ಮೊಬೈಲ್ ದೋಚಿ ಆರೋಪಿಗಳು ಪರಾರಿಯಾಗಿದ್ದಾರೆ’ ಎಂದು ಪೊಲೀಸರು ತಿಳಿಸಿದರು.