<p><strong>ಯಲಹಂಕ: ಕೋಗಿಲು ಲೇಔಟ್ನಲ್ಲಿ ಶೆಡ್ಗಳ ತೆರವು ಕಾರ್ಯಾಚರಣೆಯಿಂದ ಬೀದಿಗೆ ಬಿದ್ದಿರುವ ನಿವಾಸಿಗಳು, </strong><strong>ಎಂಟು ದಿನಗಳಿಂದ ಸಂಕಷ್ಟದಲ್ಲಿ ಜೀವನ ನಡೆಸುತ್ತಿದ್ದಾರೆ. ಶೆಡ್ಗಳನ್ನು ತೆರವುಗೊಳಿಸಿರುವ ಜಾಗದಲ್ಲೇ ಟಾರ್ಪಲ್ ಶೀಟ್ ಹಾಕಿಕೊಂಡು ವಾಸ ಮುಂದುವರಿಸಿದ್ದಾರೆ.</strong></p>.<p>‘ಸರ್ಕಾರ ಮೂರು ಕಿಲೋಮೀಟರ್ ದೂರದಲ್ಲಿ ತಾತ್ಕಾಲಿಕ ಆಶ್ರಯ ಕೇಂದ್ರ ತೆರೆದಿದೆ. ನಾವು ಅಲ್ಲಿಗೆ ಹೋದರೆ ಇಲ್ಲಿ ಸಂಪೂರ್ಣವಾಗಿ ತೆರವು ಮಾಡಿ ಬೇಲಿ ಹಾಕುತ್ತಾರೆ. ಎಷ್ಟೇ ಕಷ್ಟವಾದರೂ ನಾವು ಇಲ್ಲೇ ಇರುತ್ತೇವೆ. ಪುನರ್ವಸತಿ ಕಲ್ಪಿಸುವವರೆಗೂ ಈ ಜಾಗಬಿಟ್ಟು ಕದಲುವುದಿಲ್ಲ’ ಎಂದು ಹೇಳಿದ್ದಾರೆ.</p>.<p><strong>ಕುಡಿಯಲು ನೀರು</strong><strong>, </strong><strong>ತಿನ್ನಲು ಆಹಾರವಿಲ್ಲದೇ ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದು</strong><strong>, </strong><strong>ಸರ್ಕಾರದಿಂದ ಯಾವುದೇ ಮೂಲ ಸೌಲಭ್ಯಗಳ ವ್ಯವಸ್ಥೆ ಆಗಿಲ್ಲ ಎಂದು ನಿವಾಸಿಗಳು ಆರೋಪಿಸಿದ್ದಾರೆ. </strong><strong>ಹಲವು ಸಂಘ–ಸಂಸ್ಥೆಗಳು ಊಟ ಹಾಗೂ ನೀರಿನ ವ್ಯವಸ್ಥೆ ಮಾಡುತ್ತಿವೆ ಎಂದು ತಿಳಿಸಿದ್ದಾರೆ.</strong></p>.<p><strong>ಮಾಜಿ ಸಚಿವ ಸಿ</strong><strong>.</strong><strong>ಎಂ</strong><strong>.</strong><strong>ಇಬ್ರಾಹಿಂ </strong><strong>ಸ್ಥಳಕ್ಕೆ ಭೇಟಿ ನೀಡಿದರು. ‘</strong><strong>ಕೇರಳದಿಂದ ಸಂಸದರು</strong><strong>, </strong><strong>ಶಾಸಕರು ಬರುತ್ತಿದ್ದಾರೆ. ನಿಮಗೆ ಇಲ್ಲಿ ಬರಲು ಏನು ಕಷ್ಟ</strong><strong>? </strong><strong>ಚುನಾವಣೆ ಸಂದರ್ಭದಲ್ಲಿ ನಿಮಗೆ ಮುಸ್ಲಿಮರ ಮತ ಬೇಕು</strong><strong>, </strong><strong>ಆದರೆ ಈಗ ಮುಸ್ಲಿಮರು ಬೇಡವೇ</strong><strong>? </strong><strong>ಸಚಿವ ಕೃಷ್ಣ ಬೈರೇಗೌಡ ಸ್ಥಳಕ್ಕೆ ಯಾಕೆ ಬಂದಿಲ್ಲ’ ಎಂದು ಪ್ರಶ್ನಿಸಿದರು.</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಲಹಂಕ: ಕೋಗಿಲು ಲೇಔಟ್ನಲ್ಲಿ ಶೆಡ್ಗಳ ತೆರವು ಕಾರ್ಯಾಚರಣೆಯಿಂದ ಬೀದಿಗೆ ಬಿದ್ದಿರುವ ನಿವಾಸಿಗಳು, </strong><strong>ಎಂಟು ದಿನಗಳಿಂದ ಸಂಕಷ್ಟದಲ್ಲಿ ಜೀವನ ನಡೆಸುತ್ತಿದ್ದಾರೆ. ಶೆಡ್ಗಳನ್ನು ತೆರವುಗೊಳಿಸಿರುವ ಜಾಗದಲ್ಲೇ ಟಾರ್ಪಲ್ ಶೀಟ್ ಹಾಕಿಕೊಂಡು ವಾಸ ಮುಂದುವರಿಸಿದ್ದಾರೆ.</strong></p>.<p>‘ಸರ್ಕಾರ ಮೂರು ಕಿಲೋಮೀಟರ್ ದೂರದಲ್ಲಿ ತಾತ್ಕಾಲಿಕ ಆಶ್ರಯ ಕೇಂದ್ರ ತೆರೆದಿದೆ. ನಾವು ಅಲ್ಲಿಗೆ ಹೋದರೆ ಇಲ್ಲಿ ಸಂಪೂರ್ಣವಾಗಿ ತೆರವು ಮಾಡಿ ಬೇಲಿ ಹಾಕುತ್ತಾರೆ. ಎಷ್ಟೇ ಕಷ್ಟವಾದರೂ ನಾವು ಇಲ್ಲೇ ಇರುತ್ತೇವೆ. ಪುನರ್ವಸತಿ ಕಲ್ಪಿಸುವವರೆಗೂ ಈ ಜಾಗಬಿಟ್ಟು ಕದಲುವುದಿಲ್ಲ’ ಎಂದು ಹೇಳಿದ್ದಾರೆ.</p>.<p><strong>ಕುಡಿಯಲು ನೀರು</strong><strong>, </strong><strong>ತಿನ್ನಲು ಆಹಾರವಿಲ್ಲದೇ ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದು</strong><strong>, </strong><strong>ಸರ್ಕಾರದಿಂದ ಯಾವುದೇ ಮೂಲ ಸೌಲಭ್ಯಗಳ ವ್ಯವಸ್ಥೆ ಆಗಿಲ್ಲ ಎಂದು ನಿವಾಸಿಗಳು ಆರೋಪಿಸಿದ್ದಾರೆ. </strong><strong>ಹಲವು ಸಂಘ–ಸಂಸ್ಥೆಗಳು ಊಟ ಹಾಗೂ ನೀರಿನ ವ್ಯವಸ್ಥೆ ಮಾಡುತ್ತಿವೆ ಎಂದು ತಿಳಿಸಿದ್ದಾರೆ.</strong></p>.<p><strong>ಮಾಜಿ ಸಚಿವ ಸಿ</strong><strong>.</strong><strong>ಎಂ</strong><strong>.</strong><strong>ಇಬ್ರಾಹಿಂ </strong><strong>ಸ್ಥಳಕ್ಕೆ ಭೇಟಿ ನೀಡಿದರು. ‘</strong><strong>ಕೇರಳದಿಂದ ಸಂಸದರು</strong><strong>, </strong><strong>ಶಾಸಕರು ಬರುತ್ತಿದ್ದಾರೆ. ನಿಮಗೆ ಇಲ್ಲಿ ಬರಲು ಏನು ಕಷ್ಟ</strong><strong>? </strong><strong>ಚುನಾವಣೆ ಸಂದರ್ಭದಲ್ಲಿ ನಿಮಗೆ ಮುಸ್ಲಿಮರ ಮತ ಬೇಕು</strong><strong>, </strong><strong>ಆದರೆ ಈಗ ಮುಸ್ಲಿಮರು ಬೇಡವೇ</strong><strong>? </strong><strong>ಸಚಿವ ಕೃಷ್ಣ ಬೈರೇಗೌಡ ಸ್ಥಳಕ್ಕೆ ಯಾಕೆ ಬಂದಿಲ್ಲ’ ಎಂದು ಪ್ರಶ್ನಿಸಿದರು.</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>