‘ಎ.ನಾರಾಯಣಪುರದಲ್ಲಿ ಮಾಲೀಕರಾದ ಅಲವೇಲು ನೆಲೆಸಿದ್ದರು. ಅವರ ಮನೆಯಿಂದ 100 ಮೀಟರ್ ದೂರದಲ್ಲಿ ಖಾಲಿ ಜಾಗವಿತ್ತು. ಅಲ್ಲಿ ನಾಲ್ಕು ಶೆಡ್ ನಿರ್ಮಿಸಿ ಬಾಡಿಗೆಗೆ ನೀಡಿದ್ದರು. ಆರೋಪಿ ಒಂದು ಶೆಡ್ನಲ್ಲಿ ನೆಲೆಸಿದ್ದ. ಬಾಡಿಗೆ ನೀಡುವಾಗ ಮನೆ ಮಾಲೀಕರು ಕೀ ಇಡುವ ಸ್ಥಳ ನೋಡಿಕೊಂಡಿದ್ದ. ಕೀ ಕೊಂಡೊಯ್ದು ನಕಲಿ ಮಾಡಿಸಿಕೊಂಡಿದ್ದ. ಮನೆಯ ಮಾಲೀಕರು ಮೇ 7ರಂದು ತಮಿಳುನಾಡಿನ ದೇವಸ್ಥಾನಕ್ಕೆ ಹೋಗಿದ್ದರು. ಅಂದು ನಕಲಿ ಕೀ ಬಳಸಿ ಕಳ್ಳತನ ಮಾಡಿದ್ದ’ ಎಂದು ಪೊಲೀಸರು ಹೇಳಿದರು.