ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಸಾಹಿತಿ ಚಂದ್ರಶೇಖರ ಕಂಬಾರ, ‘ಜನಪದಕ್ಕೆ ಇತ್ತೀಚೆಗೆ ಸರ್ಕಾರ, ವಿವಿಧ ಸಂಘ ಸಂಸ್ಥೆಗಳು ಪ್ರೋತ್ಸಾಹ ನೀಡುತ್ತಿವೆ. ಹಿಂದೆ ಇಂಥ ಪ್ರೋತ್ಸಾಹ ಇರಲಿಲ್ಲ. ಆ ಕಾಲದಲ್ಲಿ ಜಾನಪದ ಪರಿಷತ್ ಕಟ್ಟಿ ಜನಪದಲೋಕವನ್ನೇ ಅನಾವರಣಗೊಳಿಸಿದ ನಾಗೇಗೌಡರ ಕೆಲಸ ದೇಶದಲ್ಲೆಲ್ಲೂ ಆಗಿಲ್ಲ. ನಮ್ಮ ಜನಪದ ಕಲೆಗಳನ್ನು ದೇಶ, ವಿದೇಶದ ಜನರಿಗೆ ಪರಿಚಯಿಸುವ ಕೆಲಸ ಅವರಿಂದಾಗಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.