‘ಶ್ರೀಧರ್ ಹಾಗೂ ಚಂದಕಾಂತ್ ಅವರು ಕಿದ್ವಾಯಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ಆರೋಪಿ ಶ್ರೀಧರ್, ಕಿದ್ವಾಯಿ ಆಸ್ಪತ್ರೆಯಲ್ಲಿ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಆ ಯುವತಿ ಜತೆ ಚಂದ್ರಕಾಂತ್ ಹೆಚ್ಚು ಮಾತನಾಡಿದ್ದರು. ಈ ಸಂಬಂಧ ಹಿಂದೆ ಒಂದೆರಡು ಬಾರಿ ಚಂದ್ರಕಾಂತ್ಗೆ ಶ್ರೀಧರ್ ಎಚ್ಚರಿಕೆ ನೀಡಿದ್ದ. ಆದರೆ, ಚಂದ್ರಕಾಂತ್, ಸಹೋದ್ಯೋಗಿ ಮಾತಾಡಿಸುವುದರಲ್ಲಿ ತಪ್ಪೇನಿದೆ ಎಂದು ಹೇಳಿದ್ದ. ಅಂದಿನಿಂದ ಶ್ರೀಧರ್ ಹಾಗೂ ಚಂದ್ರಕಾಂತ್ ನಡುವೆ ವೈಮನಸ್ಸು ಆರಂಭವಾಗಿತ್ತು. ಕೊಲೆಗೆ ಸಂಚು ರೂಪಿಸಿದ್ದ. ಈ ಮಧ್ಯೆ ಪರಿಚಯಸ್ಥ ಸಿದ್ದೇಶ್ಗೆ ಘಟನೆ ಕುರಿತು ವಿವರಿಸಿದ್ದ. ಈ ಕೆಲಸ ಮಾಡಿಕೊಟ್ಟರೆ, ಆಸ್ಪತ್ರೆಯಲ್ಲಿ ಕೆಲಸ ಕೊಡಿಸುತ್ತೇನೆ ಎಂದು ಆಮಿಷವೊಡ್ಡಿದ್ದ. ಅದರಂತೆ ಸಿದ್ದೇಶ್ ಹಾಗೂ ನಿತೇಶ್ ಯೋಜನೆ ರೂಪಿಸಿದ್ದರು. ಕೊಲೆಗೆ ₹1 ಲಕ್ಷಕ್ಕೆ ಸುಪಾರಿ ಪಡೆದುಕೊಂಡಿದ್ದರು. ಸುಂಕದಕಟ್ಟೆಯಲ್ಲಿ ಚಂದ್ರಕಾಂತ್ ಅವರು ನಡೆದು ತೆರಳುತ್ತಿದ್ದ ವೇಳೆ ಕೊಲೆಗೆ ಯತ್ನಿಸಿದ್ದರು’ ಎಂದು ಪೊಲೀಸರು ಹೇಳಿದರು.