‘ಆರೋಪಿ ಪ್ರತೀಕ್, ಮಾ. 19ರಂದು ರಾತ್ರಿ 9 ಗಂಟೆ ಸುಮಾರಿಗೆ ಎಂ.ಎಸ್.ರಾಮಯ್ಯ ಜಂಕ್ಷನ್ ಕಡೆಯಿಂದ ಸದಾಶಿವನಗರ ಕಡೆಗೆ ಬೈಕ್ನಲ್ಲಿ ಹೊರಟಿದ್ದ. ಹಿಂಬದಿಯಲ್ಲಿ ಸ್ನೇಹಿತೆ ಕುಳಿತಿದ್ದಳು. ಆರೋಪಿ ಪ್ರತೀಕ್, ಜಂಕ್ಷನ್ನಲ್ಲಿ ಸಿಗ್ನಲ್ ಜಂಪ್ ಮಾಡಿ ಮುಂದಕ್ಕೆ ಹೋಗಿದ್ದ. ಸಿಗ್ನಲ್ನಲ್ಲಿ ವ್ಯತ್ಯಾಸವಾಗಿರುವುದಾಗಿ ಭಾವಿಸಿದ್ದ ಆತ, ರಸ್ತೆ ಪಕ್ಕದಲ್ಲಿ ಬೈಕ್ ನಿಲ್ಲಿಸಿ ಕರ್ತವ್ಯನಿರತ ಕಾನ್ಸ್ಟೆಬಲ್ ಬಳಿ ತೆರಳಿದ್ದ. ‘ಸರಿಯಾಗಿ ಸಿಗ್ನಲ್ ನಿರ್ವಹಿಸಲು ಬರುವುದಿಲ್ಲವೇ?’ ಎಂದು ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದ’ ಎಂದು ಮೂಲಗಳು ತಿಳಿಸಿವೆ.