‘ಕೇಂದ್ರ ಸರ್ಕಾರವು ರಾಷ್ಟ್ರೀಯ ವೃದ್ಧಾಪ್ಯ ವೇತನ ಯೋಜನೆಯನ್ನು 2007ರಲ್ಲಿ ಜಾರಿಗೊಳಿಸಿದೆ. ಬಡತನ ರೇಖೆಗಿಂತ ಕೆಳಗಿರುವ, 60 ವರ್ಷ ದಾಟಿರುವ ಹಿರಿಯ ನಾಗರಿಕರಿಗೆ ₹2,000 ನೀಡಲಾಗುತ್ತಿದೆ. 2007ರಿಂದ ಈವರೆಗೆ ಎಲ್ಲ ವಸ್ತುಗಳ ಬೆಲೆ ಗಗನಕ್ಕೇರಿದ್ದರೂ ಈ ಪಿಂಚಣಿ ಮೊತ್ತ ಏರಿಕೆಯಾಗಿಲ್ಲ. ಬಡತನ ರೇಖೆಯ ಕೆಳಗಿನ, ಮೇಲಿನ ಎಂದೆಲ್ಲ ವಿಭಾಗ ಮಾಡದೇ ಎಲ್ಲ ಹಿರಿಯರಿಗೆ ಪಿಂಚಣಿ ಜಾರಿ ಮಾಡಬೇಕು. ಯಾವುದೇ ಪಿಂಚಣಿ ಇಲ್ಲದವರಿಗೆ ತಿಂಗಳಿಗೆ ಕನಿಷ್ಠ ₹ 3,000 ನಿಗದಿ ಮಾಡಬೇಕು’ ಎಂಬುದು ಸಂಘಟನೆಗಳ ಆಗ್ರಹವಾಗಿದೆ.