ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೇರಳಕ್ಕೆ ಪಿ.ವಿ. ಮೋಹನ್‌ ಎಐಸಿಸಿ ಕಾರ್ಯದರ್ಶಿ

Published 30 ಮಾರ್ಚ್ 2024, 22:41 IST
Last Updated 30 ಮಾರ್ಚ್ 2024, 22:41 IST
ಅಕ್ಷರ ಗಾತ್ರ

ಬೆಂಗಳೂರು: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೆಪಿಸಿಸಿಯ ಉಪಾಧ್ಯಕ್ಷ ಪಿ.ವಿ. ಮೋಹನ್ ಅವರನ್ನು ಕೇರಳ ರಾಜ್ಯದ ಎಐಸಿಸಿಯ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ.

ಕೆಪಿಸಿಸಿ ಬೂತ್ ಮಟ್ಟದ ಏಜೆಂಟರ ಸಂಯೋಜನಾ ಮತ್ತು ತರಬೇತಿ ಸಮಿತಿಯ →ರಾಜ್ಯ ಘಟಕದ →ಅಧ್ಯಕ್ಷರೂ ಆಗಿರುವ ಮೋಹನ್‌, ಇತ್ತೀಚೆಗೆ ನಡೆದ ತೆಲಂಗಾಣ ವಿಧಾನಸಭೆ ಚುನಾವಣೆಯ ಉಸ್ತುವಾರಿ ಆಗಿಯೂ ಕೆಲಸಮಾಡಿದ್ದರು.

ಯುವ ಇಂಟಕ್: ಚಂದ್ರಶೇಖರ್ ನೇಮಕ

ಕೆಪಿಸಿಸಿ ಯುವ ಇಂಟಕ್ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಜಿ. ಚಂದ್ರಶೇಖರ್
ನೇಮಕಗೊಂಡಿದ್ದಾರೆ.

ವಿಧಾನಪರಿಷತ್ ಸದಸ್ಯದ ಸಲೀಂ ಅಹಮದ್, ಬಿಎಂಟಿಸಿ ಮಾಜಿ ಉಪಾಧ್ಯಕ್ಷ ವಿ. ಎಸ್. ಆರಾಧ್ಯ, ಬಿಬಿಎಂಪಿ ಮಾಜಿ ಸದಸ್ಯ ಮೋಹನ್ ಕುಮಾರ್‌ ಮತ್ತು ಯುವ ಇಂಟಕ್ ಅಧ್ಯಕ್ಷ ಟಿ.ವೈ. ಅರುಣ್ ಅವರು ಚಂದ್ರಶೇಖರ್‌ ಅವರಿಗೆ ಕೆಪಿಎಸ್‌ಸಿ ಯುವ ಇಂಟಕ್ ಘಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ನೇಮಕಾತಿ ಆದೇಶ ಪತ್ರ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT