ವಿಮರ್ಶಕ ಬಸವರಾಜ ಕಲ್ಗುಡಿ, ‘ಎರಡನೇ ಮಹಾಯುದ್ಧದಲ್ಲಿ ನಿಶ್ಯಬ್ದವಾಗಿ ನೋವು ಅನುಭವಿಸಿದವಳು ಹೆಣ್ಣು. ಆದರೆ, ಈ ಬಗ್ಗೆ ಯಾರೂ ಬರೆದಿಲ್ಲ. ಯುದ್ಧ, ಸಾವು, ಸೈನಿಕರು, ಗೆಲುವು ಹೀಗೆ ಪುರುಷ ಕೇಂದ್ರಿತ ಬರಹಗಳೇ ಬಂದವು. ಯುದ್ಧದಲ್ಲಿ ತಮ್ಮವರನ್ನು ಕಳೆದುಕೊಂಡ ಹೆಣ್ಣಿನ ಯಾತನೆ ಕೇಳಿದವರಿಲ್ಲ. ಹೆಣ್ಣಿನ ಅಸ್ತಿತ್ವ, ಬದುಕು, ಸ್ವಾತಂತ್ರ್ಯ ಹಾಗೂ ಒಂಟಿತನದ ಬಗ್ಗೆ ವೈದೇಹಿ ಅವರ ಸಾಹಿತ್ಯ ಕಟ್ಟಿಕೊಡುತ್ತದೆ’ ಎಂದು ತಿಳಿಸಿದರು.