<p><strong>ಬೆಂಗಳೂರು</strong>: ಬೀದರ್ ಜಿಲ್ಲೆಯ ಭಾಲ್ಕಿ ಹಿರೇಮಠದಲ್ಲಿ 2026ರ ಜ.24ರಿಂದ ಮೂರು ದಿನಗಳ ಕಾಲ ವೀರಲೋಕ ಪುಸ್ತಕ ಸಂತೆ ನಡೆಯಲಿದೆ. ಮೊದಲ ಬಾರಿಗೆ ಬೆಂಗಳೂರಿನಿಂದ ಹೊರಗೆ ಪುಸ್ತಕ ಸಂತೆಯನ್ನು ಆಯೋಜಿಸಲಾಗಿದೆ. </p>.<p>ಭಾಲ್ಕಿಮಠದ ಗುರುಪಟ್ಟದ್ದೇವರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸುರೇಶ ಚನಶೆಟ್ಟಿ ಮತ್ತು ಸಂಚಾಲಕ ಗುರುನಾಥ ರಾಜಗೀರ ನೇತೃತ್ವದಲ್ಲಿ ಪುಸ್ತಕ ಸಂತೆ ನಡೆಯಲಿದೆ. 50 ಮಳಿಗೆಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಈಗಾಗಲೇ ಮಳಿಗೆಯ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ.</p>.<p>ಬೆಂಗಳೂರಿನಿಂದ 100 ಲೇಖಕರನ್ನು ಬೀದರ್ನ ಪುಸ್ತಕ ಸಂತೆಗೆ ಆಹ್ವಾನಿಸಲಾಗುತ್ತಿದೆ. ಲೇಖಕರಿಗೆ ಮೂರು ದಿನ ವಸತಿ, ಊಟೋಪಚಾರ, ಬೀದರ್ ಜಿಲ್ಲೆಯ ಐತಿಹಾಸಿಕ ತಾಣಗಳ ಪ್ರವಾಸ ಏರ್ಪಡಿಸಲಾಗಿದೆ.</p>.<p>ಮೇಳದಲ್ಲಿ ಭಾಗಿಯಾಗುವ ಪ್ರಕಾಶಕರಿಗೆ ಆಯೋಜಕರ ವತಿಯಿಂದಲೇ ಮೂರು ದಿನದ ಊಟೋಪಚಾರ ಮತ್ತು ವಸತಿ ಸೌಕರ್ಯ ಕಲ್ಪಿಸಲಾಗುತ್ತದೆ. ಆಸಕ್ತ ಲೇಖಕರು ಹಾಗೂ ಪ್ರಕಾಶಕರು ನೋಂದಣಿಗೆ 70221 22121 ಸಂಪರ್ಕಿಸಬಹುದು ಎಂದು ವೀರಲೋಕ ಸಂಸ್ಥಾಪಕ ವೀರಕಪುತ್ರ ಶ್ರೀನಿವಾಸ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಬೀದರ್ ಜಿಲ್ಲೆಯ ಭಾಲ್ಕಿ ಹಿರೇಮಠದಲ್ಲಿ 2026ರ ಜ.24ರಿಂದ ಮೂರು ದಿನಗಳ ಕಾಲ ವೀರಲೋಕ ಪುಸ್ತಕ ಸಂತೆ ನಡೆಯಲಿದೆ. ಮೊದಲ ಬಾರಿಗೆ ಬೆಂಗಳೂರಿನಿಂದ ಹೊರಗೆ ಪುಸ್ತಕ ಸಂತೆಯನ್ನು ಆಯೋಜಿಸಲಾಗಿದೆ. </p>.<p>ಭಾಲ್ಕಿಮಠದ ಗುರುಪಟ್ಟದ್ದೇವರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸುರೇಶ ಚನಶೆಟ್ಟಿ ಮತ್ತು ಸಂಚಾಲಕ ಗುರುನಾಥ ರಾಜಗೀರ ನೇತೃತ್ವದಲ್ಲಿ ಪುಸ್ತಕ ಸಂತೆ ನಡೆಯಲಿದೆ. 50 ಮಳಿಗೆಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಈಗಾಗಲೇ ಮಳಿಗೆಯ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ.</p>.<p>ಬೆಂಗಳೂರಿನಿಂದ 100 ಲೇಖಕರನ್ನು ಬೀದರ್ನ ಪುಸ್ತಕ ಸಂತೆಗೆ ಆಹ್ವಾನಿಸಲಾಗುತ್ತಿದೆ. ಲೇಖಕರಿಗೆ ಮೂರು ದಿನ ವಸತಿ, ಊಟೋಪಚಾರ, ಬೀದರ್ ಜಿಲ್ಲೆಯ ಐತಿಹಾಸಿಕ ತಾಣಗಳ ಪ್ರವಾಸ ಏರ್ಪಡಿಸಲಾಗಿದೆ.</p>.<p>ಮೇಳದಲ್ಲಿ ಭಾಗಿಯಾಗುವ ಪ್ರಕಾಶಕರಿಗೆ ಆಯೋಜಕರ ವತಿಯಿಂದಲೇ ಮೂರು ದಿನದ ಊಟೋಪಚಾರ ಮತ್ತು ವಸತಿ ಸೌಕರ್ಯ ಕಲ್ಪಿಸಲಾಗುತ್ತದೆ. ಆಸಕ್ತ ಲೇಖಕರು ಹಾಗೂ ಪ್ರಕಾಶಕರು ನೋಂದಣಿಗೆ 70221 22121 ಸಂಪರ್ಕಿಸಬಹುದು ಎಂದು ವೀರಲೋಕ ಸಂಸ್ಥಾಪಕ ವೀರಕಪುತ್ರ ಶ್ರೀನಿವಾಸ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>