<p><strong>ಬೆಂಗಳೂರು:</strong> ಒಂದೂವರೆ ದಶಕದ ಹಿಂದಿನವರೆಗೂ ಸುತ್ತಲಿನ ಭತ್ತದ ಗದ್ದೆಗಳಿಗೆ ನೀರುಣಿಸಿ, ಅನ್ನದಾನಿ ಎನಿಸಿಕೊಂಡಿದ್ದ ವಿಭೂತಿಪುರ ಕೆರೆ ಇಂದು ಬಯಲು ಶೌಚಾಲಯವಾಗಿದೆ.</p>.<p>ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದಲ್ಲಿ ಇರುವ ಈ ಕೆರೆಯ ಒಡಲಲ್ಲಿ ಹೂಳು ತುಂಬಿದೆ. ಗೃಹೋತ್ಪತ್ತಿ ಕಸ, ಕಟ್ಟಡ ನಿರ್ಮಾಣ ತ್ಯಾಜ್ಯವನ್ನು ಕೆರೆಯ ಅಂಚಿನ ಅಲ್ಲಲ್ಲಿ ಸುರಿಯಲಾಗಿದೆ. ಕೆರೆಯ ಸುತ್ತಲಿನ ನಿವಾಸಿಗಳು ನಿತ್ಯದ ಶೌಚಕ್ಕಾಗಿ ಕೆರೆಯಂಗಳವನ್ನೆ ಅವಲಂಬಿಸಿದ್ದಾರೆ. ಹಾಗಾಗಿ ದುರ್ವಾಸನೆ ಹೆಚ್ಚಿದೆ.</p>.<p>ಎಲ್.ಬಿ.ಶಾಸ್ತ್ರಿ ನಗರ, ಬೃಂದಾವನ ಗಾರ್ಡನ್ ಬಡಾವಣೆ, ಬಿಇಎಂಎಲ್ ಕಡೆಯಿಂದ ಹರಿದು ಬರುವ ಕೊಳಚೆ ನೀರು ಈ ಹಿಂದೆ ಕೆರೆಗೆ ಸೇರುತ್ತಿತ್ತು. ಕೆರೆಯ ದಕ್ಷಿಣ ಭಾಗದಲ್ಲಿ ಪ್ರತ್ಯೇಕ ಒಳಚರಂಡಿ ಮಾರ್ಗ ನಿರ್ಮಿಸಿ ಆ ಕೊಳಕು ನೀರನ್ನು ಕೋರಮಂಗಲ–ಚಲ್ಲಘಟ್ಟ ಕಣಿವೆಗೆ ಹರಿಸುವ, ಕೆರೆ ಅಭಿವೃದ್ಧಿ ಕಾಮಗಾರಿಯನ್ನು ಪಾಲಿಕೆ ಕೈಗೆತ್ತಿಕೊಂಡಿದೆ. ಆದರೆ, ಆ ಕೆಲಸ ತ್ವರಿತವಾಗಿ ನಡೆಯುತ್ತಿಲ್ಲ ಎಂಬುದು ಸ್ಥಳೀಯರ ಆರೋಪ.</p>.<p>ಕೆರೆಯ ಬಯಲಲ್ಲಿ ಜೊಂಡು ಹುಲ್ಲು, ಕಳೆ ಸಸ್ಯಗಳು ಬೆಳೆದಿವೆ. ನಿಂತಿರುವ ಕೊಳಚೆ ನೀರಿನಲ್ಲಿಯೇ ಕೊಕ್ಕರೆ ಜಾತಿಯ ಪಕ್ಷಿಗಳು ತಮ್ಮ ದಿನನಿತ್ಯದ ಆಹಾರವನ್ನು ಹುಡುಕುತ್ತಿವೆ. ಸುರಿಯುವ ಕಸದಿಂದ ಬೀದಿನಾಯಿಗಳ ಕಾಟ ಹೆಚ್ಚಿದೆ. ‘ಆದ್ದರಿಂದ ಸದ್ಯದ ಕಚ್ಚಾ ನಡಿಗೆ ಪಥ<br />ದಲ್ಲಿ ವಾಯುವಿಹಾರ ಮಾಡಲೂ ಹೆದುರುತ್ತಿದ್ದೇವೆ’ ಎಂದರು ಸ್ಥಳೀಯರೊಬ್ಬರು.</p>.<p>‘ಕೆರೆಯಲ್ಲಿ ಇಷ್ಟುದಿನ ಕೊಳಚೆನೀರು ನಿಂತಿದ್ದರಿಂದ ಅಂತರ್ಜಲವು ಮಲೀನಗೊಂಡಿದೆ. ಕೊಳವೆಬಾವಿ ನೀರನ್ನುಗೃಹ ಬಳಕೆಗೆ ಮಾತ್ರ ಉಪಯೋಗಿಸುತ್ತೇವೆ. ಕುಡಿಯಲು ಮತ್ತು ಅಡುಗೆಗೆ ಕ್ಯಾನ್ ನೀರನ್ನೆ ಬಳಸುತ್ತಿದ್ದೇವೆ’ ಎಂದರು ಮತ್ತೊಬ್ಬರು.</p>.<p class="Subhead">‘ಅಂದು ಬೇಕಾದಷ್ಟು ಹಾಲಿತ್ತು, ಇಂದು ನೀರೂ ಇಲ್ಲ’: 70ರ ಹೊಸ್ತಿಲಲ್ಲಿರುವ ರಾಘವಲು ಅವರನ್ನು ಮಾತನಾಡಿಸಿದಾಗ, ‘ವಿಭೂತಿಪುರಕ್ಕೆ40 ವರ್ಷಗಳ ಹಿಂದೆ ಬಂದಾಗ, ಇಲ್ಲಿ ಎತ್ತ ನೋಡಿದರತ್ತ ಭತ್ತದ ಗದ್ದೆಗಳು, ತೆಂಗು, ಸೇಪೆಕಾಯಿ ತೋಟಗಳು, ರಾಗಿ ಹೊಲಗಳು ಇದ್ದವು. ಬೇಕಾದಷ್ಟು ಮೇವಿತ್ತು. ಸಾಕಿದ್ದ ಹಸು–ಕರುಗಳಿಂದ ಬೇರೆಯವರಿಗೆ ಹಂಚುವಷ್ಟುಹಾಲು–ಹೈನು ಮನೆಗಳಲ್ಲಿ ಇರುತ್ತಿತ್ತು’ ಎಂದು ನೆನಪಿಸಿಕೊಂಡರು.</p>.<p>‘ಹತ್ತು–ಹದಿನೈದು ವರ್ಷದಿಂದ ಸಿಟಿ ಬೆಳೆಯುತ್ತ, ಕೆರೆ ಚಿಕ್ಕದಾಯಿತು. ಗಲೀಜು ತುಂಬಿಕೊಂಡಿತು. ಈಗ ಈ ಪ್ರದೇಶದಲ್ಲಿ ಕುಡಿಯುವ ನೀರನ್ನು ಕ್ಯಾನ್ಗಳಲ್ಲಿ ಕೊಂಡು ತರಬೇಕಿದೆ. ಎಲ್ಲ ಹಣದ ಮಹಿಮೆ ನೋಡಪ್ಪ ಇದು’ ಎಂದು ವಿಷಾದಿಸಿದರು ಹಿರಿಯ ನಾಗರಿಕರಾದ ನಾಗರಾಜ್. ಈ ಕೆರೆ 2017ರ ವರೆಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿತ್ತು.</p>.<p>ಈಗ ಪಾಲಿಕೆಯಲ್ಲಿದೆ. ಲೋಕಾಯುಕ್ತರ ನಿರ್ದೇಶನದ ಮೇರೆಗೆ ಪಾಲಿಕೆ ₹3 ಕೋಟಿ ವೆಚ್ಚದಲ್ಲಿ ಕೆರೆ ಅಭಿವೃದ್ಧಿ ಕಾಮಗಾರಿಯನ್ನು ಕಳೆದ ಮಾರ್ಚ್ನಿಂದ ಆರಂಭಿಸಿದೆ.</p>.<p><strong>ಕೆರೆ ಕುರಿತು</strong></p>.<p>* 45 ಎಕರೆ ಕೆರೆಯ ಒಟ್ಟು ವಿಸ್ತೀರ್ಣ</p>.<p>* ₹ 3 ಕೋಟಿ ಕೆರೆ ಅಭಿವೃದ್ಧಿಗೆ ಪಾಲಿಕೆ ಮೀಸಲಿಟ್ಟ ಮೊತ್ತ</p>.<p>* 3 ಕಿ.ಮೀ. ಕೆರೆ ಸುತ್ತಲಿನ ನಡಿಗೆ ಪಥದ ಉದ್ದ</p>.<p><strong>ಕೆರೆಯಲ್ಲಿನ ಸಮಸ್ಯೆಗಳು</strong></p>.<p>* ದಕ್ಷಿಣ ಭಾಗದಲ್ಲಿ ಹೆಚ್ಚು ಒತ್ತುವರಿಯಾಗಿದೆ</p>.<p>* ಹೂಳು ಮತ್ತು ಕಳೆ ಸಸಿಗಳಿಂದ ತುಂಬಿದೆ</p>.<p>* ಶೌಚ, ತ್ಯಾಜ್ಯದಿಂದ ಅಲ್ಲಲ್ಲಿ ಮಲಿನಗೊಂಡಿದೆ</p>.<p>* ಬೀದಿನಾಯಿಗಳ ಸಂತತಿ ಹೆಚ್ಚುತ್ತಿದೆ</p>.<p>* ಮಕ್ಕಳ ಮೈದಾನ ಹಾಳಾಗಿದೆ</p>.<p>* ಏರಿ ಕೆಳಗೆ ನೆಟ್ಟಿರುವ ಗಿಡಗಳು ಪೋಷಣೆ ಇಲ್ಲದೆ ಒಣಗುತ್ತಿವೆ</p>.<p><strong>ಪಾಲಿಕೆಯ ಕೆರೆ ಅಭಿವೃದ್ಧಿ ಯೋಜನೆ</strong></p>.<p>* ಕೊಳಚೆ ನೀರನ್ನು ಕೆ.ಸಿ.ವ್ಯಾಲಿಗೆ ಹರಿಸುವುದು</p>.<p>* ಹೂಳೆತ್ತಿ ನೀರು ಸಂಗ್ರಹ ಸಾಮರ್ಥ್ಯ ಹೆಚ್ಚಿಸುವುದು</p>.<p>* ಏರಿ ಸದೃಢಗೊಳಿಸಿ, ಜೌಗು ಪ್ರದೇಶ ನಿರ್ಮಿಸುವುದು</p>.<p>* ಒತ್ತುವರಿ ತಡೆಗೆ ತಂತಿಬೇಲಿ ಅಳವಡಿಸುವುದು</p>.<p>* ವಾಯುವಿಹಾರಕ್ಕೆ ನಡಿಗೆ ಪಥ ನಿರ್ಮಿಸುವುದು</p>.<p>* ಕಲ್ಯಾಣಿ ನಿರ್ಮಾಣ ಮಾಡುವುದು</p>.<p>* ಕೆರೆ ಕಾವಲಿಗೆ ಗೃಹರಕ್ಷಕ ದಳದ ಸಿಬ್ಬಂದಿ ನಿಯೋಜಿಸುವುದು</p>.<p>* ಮಕ್ಕಳ ಆಟದ ಮೈದಾನ ನಿರ್ಮಿಸುವುದು</p>.<p>* ಕೆಲವು ನಿರ್ಗತಿಕರು ಕೆರೆಯ ನಾಲ್ಕೈದು ಎಕರೆ ಜಾಗದಲ್ಲಿ ಶೆಡ್ ಕಟ್ಟಿಕೊಂಡಿದ್ದಾರೆ. ಅವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿದ ಬಳಿಕವೇ ಒತ್ತುವರಿ ತೆರವುಗೊಳಿಸುತ್ತೇವೆ<br /><strong>-ಬಿ.ಎ.ಬಸವರಾಜು,</strong> ಶಾಸಕ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಒಂದೂವರೆ ದಶಕದ ಹಿಂದಿನವರೆಗೂ ಸುತ್ತಲಿನ ಭತ್ತದ ಗದ್ದೆಗಳಿಗೆ ನೀರುಣಿಸಿ, ಅನ್ನದಾನಿ ಎನಿಸಿಕೊಂಡಿದ್ದ ವಿಭೂತಿಪುರ ಕೆರೆ ಇಂದು ಬಯಲು ಶೌಚಾಲಯವಾಗಿದೆ.</p>.<p>ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದಲ್ಲಿ ಇರುವ ಈ ಕೆರೆಯ ಒಡಲಲ್ಲಿ ಹೂಳು ತುಂಬಿದೆ. ಗೃಹೋತ್ಪತ್ತಿ ಕಸ, ಕಟ್ಟಡ ನಿರ್ಮಾಣ ತ್ಯಾಜ್ಯವನ್ನು ಕೆರೆಯ ಅಂಚಿನ ಅಲ್ಲಲ್ಲಿ ಸುರಿಯಲಾಗಿದೆ. ಕೆರೆಯ ಸುತ್ತಲಿನ ನಿವಾಸಿಗಳು ನಿತ್ಯದ ಶೌಚಕ್ಕಾಗಿ ಕೆರೆಯಂಗಳವನ್ನೆ ಅವಲಂಬಿಸಿದ್ದಾರೆ. ಹಾಗಾಗಿ ದುರ್ವಾಸನೆ ಹೆಚ್ಚಿದೆ.</p>.<p>ಎಲ್.ಬಿ.ಶಾಸ್ತ್ರಿ ನಗರ, ಬೃಂದಾವನ ಗಾರ್ಡನ್ ಬಡಾವಣೆ, ಬಿಇಎಂಎಲ್ ಕಡೆಯಿಂದ ಹರಿದು ಬರುವ ಕೊಳಚೆ ನೀರು ಈ ಹಿಂದೆ ಕೆರೆಗೆ ಸೇರುತ್ತಿತ್ತು. ಕೆರೆಯ ದಕ್ಷಿಣ ಭಾಗದಲ್ಲಿ ಪ್ರತ್ಯೇಕ ಒಳಚರಂಡಿ ಮಾರ್ಗ ನಿರ್ಮಿಸಿ ಆ ಕೊಳಕು ನೀರನ್ನು ಕೋರಮಂಗಲ–ಚಲ್ಲಘಟ್ಟ ಕಣಿವೆಗೆ ಹರಿಸುವ, ಕೆರೆ ಅಭಿವೃದ್ಧಿ ಕಾಮಗಾರಿಯನ್ನು ಪಾಲಿಕೆ ಕೈಗೆತ್ತಿಕೊಂಡಿದೆ. ಆದರೆ, ಆ ಕೆಲಸ ತ್ವರಿತವಾಗಿ ನಡೆಯುತ್ತಿಲ್ಲ ಎಂಬುದು ಸ್ಥಳೀಯರ ಆರೋಪ.</p>.<p>ಕೆರೆಯ ಬಯಲಲ್ಲಿ ಜೊಂಡು ಹುಲ್ಲು, ಕಳೆ ಸಸ್ಯಗಳು ಬೆಳೆದಿವೆ. ನಿಂತಿರುವ ಕೊಳಚೆ ನೀರಿನಲ್ಲಿಯೇ ಕೊಕ್ಕರೆ ಜಾತಿಯ ಪಕ್ಷಿಗಳು ತಮ್ಮ ದಿನನಿತ್ಯದ ಆಹಾರವನ್ನು ಹುಡುಕುತ್ತಿವೆ. ಸುರಿಯುವ ಕಸದಿಂದ ಬೀದಿನಾಯಿಗಳ ಕಾಟ ಹೆಚ್ಚಿದೆ. ‘ಆದ್ದರಿಂದ ಸದ್ಯದ ಕಚ್ಚಾ ನಡಿಗೆ ಪಥ<br />ದಲ್ಲಿ ವಾಯುವಿಹಾರ ಮಾಡಲೂ ಹೆದುರುತ್ತಿದ್ದೇವೆ’ ಎಂದರು ಸ್ಥಳೀಯರೊಬ್ಬರು.</p>.<p>‘ಕೆರೆಯಲ್ಲಿ ಇಷ್ಟುದಿನ ಕೊಳಚೆನೀರು ನಿಂತಿದ್ದರಿಂದ ಅಂತರ್ಜಲವು ಮಲೀನಗೊಂಡಿದೆ. ಕೊಳವೆಬಾವಿ ನೀರನ್ನುಗೃಹ ಬಳಕೆಗೆ ಮಾತ್ರ ಉಪಯೋಗಿಸುತ್ತೇವೆ. ಕುಡಿಯಲು ಮತ್ತು ಅಡುಗೆಗೆ ಕ್ಯಾನ್ ನೀರನ್ನೆ ಬಳಸುತ್ತಿದ್ದೇವೆ’ ಎಂದರು ಮತ್ತೊಬ್ಬರು.</p>.<p class="Subhead">‘ಅಂದು ಬೇಕಾದಷ್ಟು ಹಾಲಿತ್ತು, ಇಂದು ನೀರೂ ಇಲ್ಲ’: 70ರ ಹೊಸ್ತಿಲಲ್ಲಿರುವ ರಾಘವಲು ಅವರನ್ನು ಮಾತನಾಡಿಸಿದಾಗ, ‘ವಿಭೂತಿಪುರಕ್ಕೆ40 ವರ್ಷಗಳ ಹಿಂದೆ ಬಂದಾಗ, ಇಲ್ಲಿ ಎತ್ತ ನೋಡಿದರತ್ತ ಭತ್ತದ ಗದ್ದೆಗಳು, ತೆಂಗು, ಸೇಪೆಕಾಯಿ ತೋಟಗಳು, ರಾಗಿ ಹೊಲಗಳು ಇದ್ದವು. ಬೇಕಾದಷ್ಟು ಮೇವಿತ್ತು. ಸಾಕಿದ್ದ ಹಸು–ಕರುಗಳಿಂದ ಬೇರೆಯವರಿಗೆ ಹಂಚುವಷ್ಟುಹಾಲು–ಹೈನು ಮನೆಗಳಲ್ಲಿ ಇರುತ್ತಿತ್ತು’ ಎಂದು ನೆನಪಿಸಿಕೊಂಡರು.</p>.<p>‘ಹತ್ತು–ಹದಿನೈದು ವರ್ಷದಿಂದ ಸಿಟಿ ಬೆಳೆಯುತ್ತ, ಕೆರೆ ಚಿಕ್ಕದಾಯಿತು. ಗಲೀಜು ತುಂಬಿಕೊಂಡಿತು. ಈಗ ಈ ಪ್ರದೇಶದಲ್ಲಿ ಕುಡಿಯುವ ನೀರನ್ನು ಕ್ಯಾನ್ಗಳಲ್ಲಿ ಕೊಂಡು ತರಬೇಕಿದೆ. ಎಲ್ಲ ಹಣದ ಮಹಿಮೆ ನೋಡಪ್ಪ ಇದು’ ಎಂದು ವಿಷಾದಿಸಿದರು ಹಿರಿಯ ನಾಗರಿಕರಾದ ನಾಗರಾಜ್. ಈ ಕೆರೆ 2017ರ ವರೆಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿತ್ತು.</p>.<p>ಈಗ ಪಾಲಿಕೆಯಲ್ಲಿದೆ. ಲೋಕಾಯುಕ್ತರ ನಿರ್ದೇಶನದ ಮೇರೆಗೆ ಪಾಲಿಕೆ ₹3 ಕೋಟಿ ವೆಚ್ಚದಲ್ಲಿ ಕೆರೆ ಅಭಿವೃದ್ಧಿ ಕಾಮಗಾರಿಯನ್ನು ಕಳೆದ ಮಾರ್ಚ್ನಿಂದ ಆರಂಭಿಸಿದೆ.</p>.<p><strong>ಕೆರೆ ಕುರಿತು</strong></p>.<p>* 45 ಎಕರೆ ಕೆರೆಯ ಒಟ್ಟು ವಿಸ್ತೀರ್ಣ</p>.<p>* ₹ 3 ಕೋಟಿ ಕೆರೆ ಅಭಿವೃದ್ಧಿಗೆ ಪಾಲಿಕೆ ಮೀಸಲಿಟ್ಟ ಮೊತ್ತ</p>.<p>* 3 ಕಿ.ಮೀ. ಕೆರೆ ಸುತ್ತಲಿನ ನಡಿಗೆ ಪಥದ ಉದ್ದ</p>.<p><strong>ಕೆರೆಯಲ್ಲಿನ ಸಮಸ್ಯೆಗಳು</strong></p>.<p>* ದಕ್ಷಿಣ ಭಾಗದಲ್ಲಿ ಹೆಚ್ಚು ಒತ್ತುವರಿಯಾಗಿದೆ</p>.<p>* ಹೂಳು ಮತ್ತು ಕಳೆ ಸಸಿಗಳಿಂದ ತುಂಬಿದೆ</p>.<p>* ಶೌಚ, ತ್ಯಾಜ್ಯದಿಂದ ಅಲ್ಲಲ್ಲಿ ಮಲಿನಗೊಂಡಿದೆ</p>.<p>* ಬೀದಿನಾಯಿಗಳ ಸಂತತಿ ಹೆಚ್ಚುತ್ತಿದೆ</p>.<p>* ಮಕ್ಕಳ ಮೈದಾನ ಹಾಳಾಗಿದೆ</p>.<p>* ಏರಿ ಕೆಳಗೆ ನೆಟ್ಟಿರುವ ಗಿಡಗಳು ಪೋಷಣೆ ಇಲ್ಲದೆ ಒಣಗುತ್ತಿವೆ</p>.<p><strong>ಪಾಲಿಕೆಯ ಕೆರೆ ಅಭಿವೃದ್ಧಿ ಯೋಜನೆ</strong></p>.<p>* ಕೊಳಚೆ ನೀರನ್ನು ಕೆ.ಸಿ.ವ್ಯಾಲಿಗೆ ಹರಿಸುವುದು</p>.<p>* ಹೂಳೆತ್ತಿ ನೀರು ಸಂಗ್ರಹ ಸಾಮರ್ಥ್ಯ ಹೆಚ್ಚಿಸುವುದು</p>.<p>* ಏರಿ ಸದೃಢಗೊಳಿಸಿ, ಜೌಗು ಪ್ರದೇಶ ನಿರ್ಮಿಸುವುದು</p>.<p>* ಒತ್ತುವರಿ ತಡೆಗೆ ತಂತಿಬೇಲಿ ಅಳವಡಿಸುವುದು</p>.<p>* ವಾಯುವಿಹಾರಕ್ಕೆ ನಡಿಗೆ ಪಥ ನಿರ್ಮಿಸುವುದು</p>.<p>* ಕಲ್ಯಾಣಿ ನಿರ್ಮಾಣ ಮಾಡುವುದು</p>.<p>* ಕೆರೆ ಕಾವಲಿಗೆ ಗೃಹರಕ್ಷಕ ದಳದ ಸಿಬ್ಬಂದಿ ನಿಯೋಜಿಸುವುದು</p>.<p>* ಮಕ್ಕಳ ಆಟದ ಮೈದಾನ ನಿರ್ಮಿಸುವುದು</p>.<p>* ಕೆಲವು ನಿರ್ಗತಿಕರು ಕೆರೆಯ ನಾಲ್ಕೈದು ಎಕರೆ ಜಾಗದಲ್ಲಿ ಶೆಡ್ ಕಟ್ಟಿಕೊಂಡಿದ್ದಾರೆ. ಅವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿದ ಬಳಿಕವೇ ಒತ್ತುವರಿ ತೆರವುಗೊಳಿಸುತ್ತೇವೆ<br /><strong>-ಬಿ.ಎ.ಬಸವರಾಜು,</strong> ಶಾಸಕ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>