ಬೆಂಗಳೂರು: ಜಲಮಂಡಳಿಯು ವಿವಿಧ ಉಪವಿಭಾಗಗಳಲ್ಲಿ ಅ.3ರಂದು ನೀರಿನ ಅದಾಲತ್ ನಡೆಸಲಿದೆ.
ನೀರಿನ ಬಿಲ್ಲು, ನೀರು ಮತ್ತು ಒಳಚರಂಡಿ ಸಂಪರ್ಕ ಕಲ್ಪಿಸುವಲ್ಲಿನ ವಿಳಂಬ, ಗೃಹ ಬಳಕೆಯಿಂದ ಗೃಹೇತರ ಬಳಕೆ ಪರಿವರ್ತನೆ ವಿಳಂಬ ಮತ್ತಿತರ ಕುಂದು–ಕೊರತೆಗಳಿಗೆ ಸಂಬಂಧಿಸಿದಂತೆ ಬೆಳಿಗ್ಗೆ 9.30 ರಿಂದ 11ರವರೆಗೆ ಅದಾಲತ್ನಲ್ಲಿ ಅಹವಾಲು ಸಲ್ಲಿಸಬಹುದು
ದಕ್ಷಿಣ1 ಉಪವಿಭಾಗ:ಮೊದಲನೇ ಮಹಡಿ, ದೇವೇಗೌಡ ಪೆಟ್ರೋಲ್ ಬಂಕ್ ಹತ್ತಿರ, ಬನಶಂಕರಿ 3ನೇ ಹಂತ. ದೂರವಾಣಿ ಸಂಖ್ಯೆ –080– 22945198.
ಪಶ್ಚಿಮ-1: ಅರ್ಕಾವತಿ ಭವನ, 5ನೇ ಮುಖ್ಯರಸ್ತೆ, 9ನೇ ಅಡ್ಡರಸ್ತೆ, ಆರ್.ಪಿ.ಸಿ ಲೇಔಟ್, ವಿಜಯನಗರ–23500013.
ಆಗ್ನೇಯ-1: ಸ್ವಾಮಿ ವಿವೇಕಾನಂದ ರಸ್ತೆ, ಲಿಡೋ ಮಾಲ್ ಎದುರು, ಹಲಸೂರು –22945159.
ನೈರುತ್ಯ-1:ದ್ವಾರಕನಾಥ ರಸ್ತೆ, ನ್ಯಾಷನಲ್ ಕಾಲೇಜು ಮುಂಭಾಗ, ವಿ.ವಿ.ಪುರ–22425193.
ಕೇಂದ್ರ-1:ನಂ. 17, ಪಾರ್ಕ್ ರಸ್ತೆ, ತುಳಸಿ ತೋಟ, ಚಿಕ್ಕ ಲಾಲ್ಬಾಗ್–22945188.
ಉತ್ತರ-1:ನಂ.1, ಎಂಇಐ ಲೇಔಟ್, 7ನೇ ಮುಖ್ಯ ರಸ್ತೆ–28371048.