‘ಸಾಹಿತ್ಯ, ಸಂಸ್ಕೃತಿಯ ಪರಿಪೋಷಣೆಗೆ ಅ.ನ.ಕೃ ನೀಡಿದ ಕೊಡುಗೆ ಅಪಾರ. ಅವರು ಬಹುಮುಖ ಸಾಧನೆ ಮಾಡಿದ್ದು, ಸಾಹಿತ್ಯ ಕಾರ್ಯವು ಅವರ ಸಾಧನೆಯ ಒಂದು ಮುಖವಾಗಿದೆ. ಕನ್ನಡ ಪರ ಸಂಘಟಿತ ಹೋರಾಟಕ್ಕೂ ಅವರು ಜನ್ಮ ನೀಡಿದ್ದರು. ಕಾದಂಬರಿಯ ಜತೆಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿಯೂ ಅವರು ಸಾಹಿತ್ಯ ಸೃಷ್ಟಿಸಿದ್ದಾರೆ. ಭಾರತೀಯ ಸಾಂಸ್ಕೃತಿಕ ಮೌಲ್ಯವನ್ನು ಅವರು ಕಾದಂಬರಿಗಳ ಮೂಲಕ ಎತ್ತಿಹಿಡಿದರು. ಉದಯೋನ್ಮುಖ ಬರಹಗಾರರನ್ನು ಬೆಳೆಸಿದ ಅವರು, ಉನ್ನತ ಸಂಸ್ಕೃತಿಯ ಮೂರ್ತರೂಪ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.