ಬೆಂಗಳೂರು: ಜಲಮಂಡಳಿಯ ಪೂರ್ವ 1ನೇ ಉಪವಿಭಾಗದ ನೀರಿನ ಅದಾಲತ್ ಕಲ್ಯಾಣನಗರದ ಎಚ್.ಆರ್.ಬಿ.ಆರ್ ಲೇಔಟ್ನ 1ನೇ ಬ್ಲಾಕ್ನಲ್ಲಿರುವ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಕಚೇರಿಯಲ್ಲಿ ಇದೇ 3ರಂದು ಬೆಳಿಗ್ಗೆ 9.30ರಿಂದ 11ರವರೆಗೆ ನಡೆಯಲಿದೆ.
ಪೂರ್ವ 1ನೇ ಉಪವಿಭಾಗದ ಸೇವಾ ಠಾಣೆಗಳಾದ ಎಚ್.ಆರ್.ಬಿ.ಆರ್ ಲೇಔಟ್, ಕಲ್ಯಾಣ ನಗರ, ಒ.ಎಂ.ಬಿ.ಆರ್ ಲೇಔಟ್ ಹಾಗೂ ಎಚ್.ಬಿ.ಆರ್ ಲೇಔಟ್ನ ವ್ಯಾಪ್ತಿಯಲ್ಲಿ ಬರುವ ಗ್ರಾಹಕರು ಅದಾಲತ್ನ ಸದುಪಯೋಗ ಪಡೆದುಕೊಳ್ಳಬಹುದು.
ನೀರಿನ ಬಿಲ್ಲಿಂಗ್, ನೀರು ಮತ್ತು ಒಳಚರಂಡಿ ಸಂಪರ್ಕ ನೀಡುವಲ್ಲಿ ವಿಳಂಬ, ಗೃಹೇತರದಿಂದ ಗೃಹಸಂಪರ್ಕಕ್ಕೆ ಪರಿವರ್ತನೆ ಮಂಜೂರಾತಿಯಲ್ಲಿ ವಿಳಂಬ, ನೀರು ಮತ್ತು ಒಳಚರಂಡಿಗೆ ಸಂಬಂಧಿಸಿದ ಎಲ್ಲ ವಿವಾದಗಳನ್ನು ಸ್ಥಳದಲ್ಲಿಯೇ ಬಗೆಹರಿಸಲಾಗುತ್ತದೆ.