‘ವೃದ್ಧ ದಂಪತಿಗೆ ದಂತಭಾಗ್ಯ ಯೋಜನೆ, ಹಲ್ಲು ಸೆಟ್ಟು ವಿತರಣೆ, ಹೀಗೊಂದು ಯೋಜನೆ, ಯೋಚನೆ... ಇದನ್ನು ಅಚ್ಚ ಕನ್ನಡದಲ್ಲಿ ಹೇಳುವುದಾದರೆ ಸರ್ಕಾರದ ಹಲ್ಕಟ್ ಯೋಜನೆ’ ಎಂಬ ಡುಂಡಿರಾಜ್ ಅವರ ಚುಟುಕು ಕಾವ್ಯವನ್ನು ಓದಿದ ಅವರು, ‘ಬೊಕ್ಕಸ ಖಾಲಿ ಮಾಡಿ ಸರ್ಕಾರ ಹಲವು ಯೋಜನೆಗಳನ್ನು ಜಾರಿ ಮಾಡುತ್ತದೆ. ಅವಿವೇಕಿ ಯೋಜನೆಗಳಿಂದಾಗುವ ತಾಪತ್ರಯಗಳನ್ನು ವಿವೇಕ ಇರುವ ಬರಹಗಾರರು ತಿಳಿಸುತ್ತಿದ್ದಾರೆ’ ಎಂದರು.