ಸಾಹಿತಿ ಚಂದ್ರಶೇಖರ ಪಾಟೀಲ, ‘21 ರಾಜ್ಯಗಳಲ್ಲಿ ಓಡಾಡಿ ಈ ಬಾರಿ ದಕ್ಷಿಣ ಭಾರತದ ಹೆಬ್ಬಾಗಿಲಿಗೆ ಬಂದ ಬಿಜೆಪಿಯ ಅಶ್ವಮೇಧ ಕುದುರೆ, ಸಮೃದ್ಧ ನಾಡಿನ ಹಸಿರು ಹುಲ್ಲಿಗೆ ಬಾಯಿ ಹಾಕಿತು. ಈಗ ಹೊಟ್ಟೆ ಕೆಡಿಸಿಕೊಂಡು ವಾಪಸ್ ಹೋಗಿದೆ. ಒಂದು ವೇಳೆ ಹೆಬ್ಬಾಗಿಲು ಪ್ರವೇಶಿಸಲು ಬಿಟ್ಟರೆ, ಆ ಕುದುರೆ ಇಡೀ ರಾಜ್ಯವನ್ನು ಆಕ್ರಮಿಸಿಬಿಡುತ್ತದೆ’ ಎಂದು ಹೇಳಿದರು.