‘ಪ್ರಜಾವಾಣಿ’ ಜತೆ ಮಾತನಾಡಿದ ಸೋಮಸುಂದರ್, ‘ಅಪಘಾತ ಸಂಭವಿಸಿದ ಕೂಡಲೇ ಜನ ಹೇಗೋ ಗಾಯಾಳುವನ್ನು ಆಸ್ಪತ್ರೆಗೆ ಕರೆದೊಯ್ಯಬಹುದಿತ್ತು. ಅದನ್ನು ಬಿಟ್ಟು ಆಂಬುಲೆನ್ಸ್ಗೆ ಕರೆ ಮಾಡಿ, ನಂತರ ಗಾಯಾಳುವಿನ ನರಳಾಟವನ್ನು ವಿಡಿಯೊ ಮಾಡುತ್ತ ನಿಂತಿದ್ದರು. ನಾವು ಸ್ಥಳಕ್ಕೆ ಹೋದಾಗಲೂ ‘ಸ್ವಲ್ಪ ಸಮಯದಲ್ಲೇ ಆಂಬುಲೆನ್ಸ್ ಬರುತ್ತದೆ ಕಾಯಿರಿ’ ಎಂದರು. ಆದರೆ, ತೀವ್ರ ರಕ್ತಸ್ರಾವವಾಗುತ್ತಿದ್ದ ಕಾರಣ ಸರಕು ಸಾಗಣೆ ಆಟೊದಲ್ಲೇ ಆಸ್ಪತ್ರೆಗೆ ಕರೆದೊಯ್ದೆವು’ ಎಂದು ಹೇಳಿದರು.