ಬೆಂಗಳೂರು: ಕವಿಗಳಿಂದ ಸಾಮಾಜಿಕ ಬದಲಾವಣೆ ಸಾಧ್ಯವೆ? ಹೌದು ಎನ್ನುತ್ತಾರೆ ಅದಕ್ಕಾಗಿ ಪಣತೊಟ್ಟಿರುವ ವಿಶ್ವ ದಾದ್ಯಂತ ಇರುವ ಒಂದು ಲಕ್ಷ ಕವಿಗಳು. ಅವರ ಪೈಕಿ 16 ಕವಿಗಳು ಇದೇ ಶನಿವಾರ (ಸೆ.20) ಕೋರ ಮಂಗಲದ ‘ಆಟಾ ಗಲಾಟಾ’ ಪುಸ್ತಕ ಮಳಿಗೆಗೆ ಬರುತ್ತಿದ್ದಾರೆ.
ಜಗತ್ತಿನಾದ್ಯಂತ ಇರುವ ಕವಿಗಳ ಪೈಕಿ ಸಾಮಾಜಿಕ ಬದಲಾವಣೆ ತುಡಿತವುಳ್ಳ ಸಮಾನಮನಸ್ಕರು ಸೇರಿ 2010 ರಲ್ಲಿ ‘ಬದಲಾವಣೆಗಾಗಿ ಕವಿಗಳು’ ಅಭಿಯಾನ ಹುಟ್ಟುಹಾಕಿದ್ದರು. ಅದರ ಭಾಗವಾಗಿ ಮೂರನೇ ಬಾರಿಗೆ ಕವಿಗಳ ದಂಡು ನಗರಕ್ಕೆ ಬರುತ್ತಿದೆ.
ಕಾರ್ಯಕ್ರಮದ ಸಹ ಆಯೋಜಕಿ ಮತ್ತು ಲೇಖಕಿ ಮಾತಂಗಿ ಸುಬ್ರಮಣಿಯನ್, ‘ಸಾಮಾಜಿಕ ಸಮಸ್ಯೆಗಳ ಕುರಿ ತಂತೆ ಅರಿವು ಮೂಡಿಸುವಲ್ಲಿ ಈ ಅಭಿ ಯಾನ ತುಂಬಾ ಪರಿಣಾಮಕಾರಿ ಯಾಗಿದೆ. ‘ಸಮಸ್ಯೆಯನ್ನು ಭಿನ್ನನೆಲೆಯಲ್ಲಿ ಕವಿ ನೋಡಿ, ಗ್ರಹಿಸುವುದರಿಂದ ಕವಿತೆ ಎನ್ನುವುದು ಬದಲಾವಣೆಗೆ ಅಗತ್ಯವಾದ ಪ್ರಬಲ ಸಾಧನ. ಪ್ರಸ್ತುತದಲ್ಲಿ ಹೆಚ್ಚುತ್ತಿರುವ ಅತ್ಯಾಚಾರ ಮತ್ತು ಲೈಂಗಿಕ ಕಿರುಕುಳದಂತಹ ಅನಾಚಾರಗಳ ಕುರಿತಂತೆ ಸಮಾಜದ ಕಣ್ಣು ತೆರೆಸಲು ಕವಿತೆಯೊಂದು ಪ್ರಭಾವಶಾಲಿ ಮಾಧ್ಯಮ’ ಎನ್ನುತ್ತಾರೆ.
‘ಈ ಕಾರ್ಯಕ್ರಮ ನಿರ್ದಿಷ್ಟ ವಿಚಾ ರದ ಮೇಲೆ ನಡೆಯುವುದಿಲ್ಲ. ಸಮಾಜ ವನ್ನು ಕಾಡುವ ಎಲ್ಲ ಬಗೆಯ ಸಮಸ್ಯೆ ಗಳನ್ನು ಇದು ಒಳಗೊಂಡಿರುತ್ತದೆ. ಇಲ್ಲಿ ಚಿಂತನೆ ಹಚ್ಚುವ ಕವಿತೆಗಳಿಂದ ಹಿಡಿದು ಸಮಸ್ಯೆಗಳನ್ನು ವ್ಯಂಗ್ಯವಾಗಿ ವಿಡಂಬಿಸುತ್ತ ಹಾಸ್ಯದ ಹೊನಲು ಹರಿಸುವ ಕಾವ್ಯಗಳ ವಾಚನ ನಡೆಯ ಲಿದೆ’ ಎನ್ನುತ್ತಾರೆ ಮಾತಂಗಿ.
ಅಭಿಯಾನದ ಹೆಸರು ಮಹತ್ವಾಕಾಂಕ್ಷೆಯಿಂದ ಕೂಡಿದೆ ಎನ್ನುವ ಕಾರ್ಯಕ್ರಮದ ರೂವಾರಿ ಶಿಖಾ ಮಾಳವಿಯಾ ‘ಸಾಮಾಜಿಕ ಬದಲಾವಣೆ ಮಾಡಬೇಕೆಂಬ ಪ್ರಬಲ ಚಿಂತನೆ ವಲಯಕ್ಕೆ ಸಿಲುಕಿ ಪ್ರಪಂಚದ ವಿವಿಧ ಮೂಲೆಯಿಂದ ಒಂದೆಡೆ ಕಲೆಯುವ ಖ್ಯಾತ ಕವಿಗಳು, ಕಲಾವಿದರನ್ನು ನೋಡುವುದೇ ಸೌಭಾಗ್ಯ’ ಎನ್ನುತ್ತಾರೆ.
ಪುಸ್ತಕ ಮಳಿಗೆಯಲ್ಲಿ ಸೆ.20ರಂದು ಕಾರ್ಯಕ್ರಮವು ಸಂಜೆ ಆರು ಗಂಟೆಗೆ ಪ್ರಾರಂಭವಾಗಲಿದೆ. ಕವಿಗಳಾದ ಸೌರವ್ ರಾಯ್, ಪ್ರಮೋದ್ ಶೆಣೈ, ಸೌರವ್ ಸಿನ್ಹಾ, ಮಿನಾಲ್ ಹರ್ಜಾವಾಲಾ, ಅಮೃತ್ ಮತ್ತು ಭರತ್, ಮಣಿ ರಾವ್, ನೀರಜ್ ಪಾಂಡೆ, ಮೋನಿಕಾ, ಭೂಮಿಕಾ ಆನಂದ್, ಬೀಜೊಯ್ ಬಾಲಗೋಪಾಲ್, ರಾಯ್ಲಾ ನೋಯಿಲ್, ಶ್ರೀದಿವ್ಯಾ ಶ್ರೀನಿವಾಸನ್, ತೃಪ್ತಿ, ಅತುಲ್ ಜೈನ್, ಆಕಾಂಕ್ಷಾ, ತೇಜಸ್ವಿನಿ ಗೋಪಾಲಸ್ವಾಮಿ ಅವರು ಭಾಗವಹಿಸಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.