ಈ ಸಂಬಂಧದ ಕಡತ ಚುನಾವಣಾ ಆಯೋಗದಿಂದ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಬಂದಿದೆ. ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ಕಡತಕ್ಕೆ ಸಹಿ ಮಾಡಬೇಕಾಗಿದೆ. ಸಹಿ ಮಾಡುವ ಮುನ್ನ ಅವರು ವರ್ಗಾವಣೆಗೆ ಕಾರಣ ಕೇಳುವ ಸಾಧ್ಯತೆ ಇದೆ. ಗುರುವಾರ ವರ್ಗಾವಣೆ ಆದೇಶ ಹೊರಬೀಳಲಿದೆ ಎಂದು ಮೂಲಗಳು ತಿಳಿಸಿವೆ. ವರ್ಗಾವಣೆಯ ಪಟ್ಟಿಯಲ್ಲಿ ಐಪಿಎಸ್ ಅಧಿಕಾರಿ ಕೃಷ್ಣಭಟ್ ಮತ್ತಿತರರ ಹೆಸರೂ ಇದೆ ಎನ್ನಲಾಗಿದೆ.