ಬೆಂಗಳೂರು: ಎಲೆಕ್ಟ್ರಾನಿಕ್ಸಿಟಿ ಸಮೀಪದ ವಿಟ್ಟಸಂದ್ರದಲ್ಲಿ ಗುರುವಾರ ಸಂಜೆ ಟ್ರ್ಯಾಕ್ಟರ್ ಹರಿದು ಎರಡೂವರೆ ವರ್ಷದ ಕೀರ್ತಿರಾಜ್ ಎಂಬ ಮಗು ಮೃತಪಟ್ಟಿದೆ.
ಕೀರ್ತಿರಾಜ್, ಆಟೊ ಚಾಲಕ ಸಂಪಂಗಿ ಮತ್ತು ತುಳಸಿ ದಂಪತಿಯ ಎರಡನೆ ಮಗ. ಸಂಜೆ ಐದು ಗಂಟೆ ಸುಮಾರಿಗೆ ಆತ, ಅಣ್ಣ ಕಿರಣ್ಕುಮಾರ್ ಜತೆ ಮನೆ ಮುಂದೆ ಆಟವಾಡುತ್ತಿದ್ದ. ಈ ವೇಳೆ ಗೊಬ್ಬರ ತುಂಬಿಕೊಂಡು ಹೋಗಲು ವಿಟ್ಟಸಂದ್ರಕ್ಕೆ ಬಂದಿದ್ದ ಟ್ರಾಕ್ಟರ್ ಮಗುವಿನ ಮೇಲೆ ಹರಿದಿದೆ ಎಂದು ಪೊಲೀಸರು ಹೇಳಿದ್ದಾರೆ. ಘಟನೆ ಸಂಬಂಧ `ಪ್ರಜಾವಾಣಿ'ಯೊಂದಿಗೆ ಮಾತನಾಡಿದ ಸಂಪಂಗಿ, `ವಿಟ್ಟಸಂದ್ರದಲ್ಲಿರುವ ಹೊಲದಲ್ಲಿ ಮನೆ ಕಟ್ಟಿಸಿಕೊಂಡು ನಾಲ್ಕು ವರ್ಷಗಳಿಂದ ವಾಸ ಮಾಡುತ್ತಿದ್ದೇವೆ.